ಮನ್ವಂತರ ಕವಿ ಕುವೆಂಪು
Main Article Content
Abstract
ರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯ ಮತ್ತು ವೈಚಾರಿಕತೆಯು ಸಮಕಾಲೀನ ಸಮಾಜಕ್ಕೆ ನೀಡಿದ ಕೊಡುಗೆಯನ್ನು ಈ ಬರಹವು ಶೋಧಿಸುತ್ತದೆ. ಕುವೆಂಪು ಅವರ ‘ವಿಶ್ವಮಾನವ ತತ್ವ’ ಮತ್ತು ‘ನಿರಂಕುಶಮತಿ’ಯಾಗುವ ಕರೆಯು ಜಾತಿ, ಮತ ಮತ್ತು ಮೌಢ್ಯಗಳ ವಿರುದ್ಧದ ಪ್ರಬಲ ಅಸ್ತ್ರಗಳಾಗಿವೆ. ‘ಮುಂದಕೆಲ್ಲಿಗೆ’ ಕವಿತೆಯ ಮೂಲಕ ಮನುಷ್ಯನ ವಿಕಾಸ ಮತ್ತು ವೈಜ್ಞಾನಿಕ ಮನೋಭಾವದ ಅಗತ್ಯವನ್ನು ಕವಿ ಹೇಗೆ ಪ್ರತಿಪಾದಿಸಿದ್ದಾರೆಂದು ವಿವರಿಸಲಾಗಿದೆ. ಯುವಜನತೆ ಕೀರ್ತಿ ಮೋಹ ಮತ್ತು ಸದ್ಯಃಫಲಾಕಾಂಕ್ಷೆಯಿಂದ ಹೊರಬಂದು, ಆತ್ಮಶ್ರೀಯನ್ನು ಬೆಳೆಸಿಕೊಳ್ಳಬೇಕೆಂಬ ಕುವೆಂಪು ಅವರ ಆಶಯವನ್ನು ಲೇಖನವು ಎತ್ತಿ ಹಿಡಿಯುತ್ತದೆ. ವಿಚಾರ ಕ್ರಾಂತಿಯ ಮೂಲಕ ಆರೋಗ್ಯಪೂರ್ಣ ಸಮಾಜ ನಿರ್ಮಾಣದ ಕನಸನ್ನು ಮತ್ತು ಪ್ರಕೃತಿಯೊಂದಿಗಿನ ಮಾನವನ ಸಂಬಂಧವನ್ನು ಇಲ್ಲಿ ಕಟ್ಟಿಕೊಡಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ನಾರಾಯಣರಾವ್ ಜಿ.ಟಿ., ಕುವೆಂಪು ದರ್ಶನ ಸಂದರ್ಶನ., 2004., ಅತ್ರಿ ಬುಕ್ ಸೆಂಟರ್, ಮಂಗಳೂರು.
ಕುವೆಂಪು., ವಿಚಾರ ಕ್ರಾಂತಿಗೆ ಆಹ್ವಾನ., 2010., ಕನ್ನಡ ಸಂಸ್ಕೃತಿ ಇಲಾಖೆ., ಬೆಂಗಳೂರು.
ಭಂಡಾರಿ ಆರ್.ವಿ., ಕುವೆಂಪು: ದೃಷ್ಟಿ-ಸೃಷ್ಟಿ., 2011., ಸುಮುಖ ಪ್ರಕಾಶನ, ಬೆಂಗಳೂರು.
ಕುವೆಂಪು., ಕೊಳಲು., 2012, ಉದಯರವಿ ಪ್ರಕಾಶನ, ಮೈಸೂರು.