ಹರಿಶ್ಚಂದ್ರಚಾರಿತ್ರದ ಹೊಲತಿಯರ ಪ್ರಸಂಗ: ದಲಿತ ಪ್ರಜ್ಞೆಯ ಟಿಪ್ಪಣಿ

Authors

  • ರಾಘವೇಂದ್ರ ಕುಪ್ಪೇಲೂರ ಸಹಾಯಕ ಪ್ರಾಧ್ಯಾಪಕ, ಕನ್ನಡ ವಿಭಾಗ, ಸೌಂದರ್ಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಆಂಡ್ ಸೈನ್ಸ್, ಬೆಂಗಳೂರು.

Keywords:

ಹರಿಶ್ವಂದ್ರಚಾರಿತ್ರ, ರಾಘವಾಂಕ, ಹೊಲತಿಯರ ಪ್ರಸಂಗ, ಗಾನರಾಣಿಯರ ಪ್ರಸಂಗ, ದಲಿತ ಪ್ರಜ್ಞೆ

Abstract

ಈ ಲೇಖನದಲ್ಲಿನ ‘ದಲಿತ ಪ್ರಜ್ಞೆ’ ಎಂಬುದನ್ನು ಆಧುನಿಕ ದಲಿತ ಲೋಕಮೀಮಾಂಸೆಯ ಅರಿವಿನ ಹಿನ್ನೆಲೆಯಲ್ಲಿ ಪ್ರಯೋಗಿಸಲಾಗಿದೆ. ಅರವಿಂದ ಮಾಲಗತ್ತಿ ಅವರು ‘ದಲಿತ ಪ್ರಜ್ಞೆ’ಯನ್ನು ಕುರಿತು ಹೀಗೆ ಹೇಳುತ್ತಾರೆ: ʼಪ್ರಜ್ಞೆ ಎಂಬ ಪದ - ಭೂತ – ವರ್ತಮಾನ - ಭವಿಷತ್ಕಾಲಗಳನ್ನು ಒಳಗೊಂಡು ಅವುಗಳನ್ನು ಒಂದು ಸರಣಿಯಲ್ಲಿರಿಸಿ ಪರಿಸರದ ಸ್ಥಿತಿಯನ್ನು ಗ್ರಹಿಸಿ ಆ ಸ್ಥಿತಿಗೆ ಚಾಲನೆ ನೀಡುವ ಶಕ್ತಿʼ ಎನ್ನುತ್ತಾರೆ. ಪ್ರಸ್ತುತ ಈ ಲೇಖನದ ವ್ಯಾಪ್ತಿಯು ಅಧ್ಯಯನದ ದೃಷ್ಟಿಯಿಂದ ಮಧ್ಯಕಾಲೀನ ಸಂದರ್ಭದ ಕವಿ ರಾಘವಾಂಕನ ಹರಿಶ್ಚಂದ್ರ ಚಾರಿತ್ರ ಕಾವ್ಯದ ಹೊಲತಿಯ ಪ್ರಸಂಗವನ್ನು ಕೇಂದ್ರಿಕರಿಸಿದೆ. ಇಲ್ಲಿ ವಿಶ್ವಾಮಿತ್ರ, ಹೊಲತಿಯರು, ಹರಿಶ್ಚಂದ್ರ ಮತ್ತು ಕವಿಯ ನೆಲೆಯಂದ ಹೀಗೆ ನಾಲ್ಕು ಪಾರ್ಶ್ವಗಳಲ್ಲಿ ದಲಿತ ಪ್ರಜ್ಞೆಯ ಕಣ್ಣೋಟವನ್ನು ಒಳಗೊಂಡಿದೆ.

References

ಅರವಿಂದ ಮಾಲಗತ್ತಿ & ಚಂದ್ರಕಿರಣ ಎಸ್. ಕುಳವಾಡಿ, (2014), ಸೀಮಾತೀತ ಕನ್ನಡ ಸಾಹಿತ್ಯ ಚರಿತ್ರೆ: ಸಂ-4 (ಪ್ರಾಚೀನ ಸಾಹಿತ್ಯ), ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.

ಪ್ರಹ್ಲಾದ ಅಗಸನಕಟ್ಟೆ, (2004), ದಲಿತ-ಬಂಡಾಯ ಕಾವ್ಯ ವಿಚಾರವಾದಗಳು, ಹರ್ಷ ಪ್ರಕಾಶನ, ಹುಬ್ಬಳ್ಳಿ.

ಭಟ್ ಜಿ. ಎಸ್. , (2018), ರಾಘವಾಂಕನ ಹರಿಶ್ಚಂದ್ರಕಾವ್ಯ ಪ್ರವೇಶ, ಅಕ್ಷರ ಪ್ರಕಾಶನ, ಹೆಗ್ಗೋಡು.

ರಂಗನಾಥಶರ್ಮ ಎನ್, (2018), ರಾಘವಾಂಕನ ಹರಿಶ್ಚಂದ್ರ ಚರಿತೆ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.

ರಂಗಣ್ಣ ಎಸ್. ವಿ. , (2022), ಶೈಲಿ-1, ಹೇಮಂತ ಸಾಹಿತ್ಯ, ಬೆಂಗಳೂರು.

ರಂಗಣ್ಣ ಎಸ್. ವಿ. , (2022), ಶೈಲಿ-2, ಹೇಮಂತ ಸಾಹಿತ್ಯ, ಬೆಂಗಳೂರು.

ರಂಗಣ್ಣ ಎಸ್. ವಿ. , (2022), ಶೈಲಿ-3, ಹೇಮಂತ ಸಾಹಿತ್ಯ, ಬೆಂಗಳೂರು.

ರವೀಂದ್ರನಾಥ ಕೆ. (2023), ವಿಜಯನಗರ ಸಾಹಿತ್ಯ-ಸಂಸ್ಕೃತಿ, ದಾಸೋಹಿ ಪ್ರಕಾಶನ, ಕಾನಾಮಡುಗು.

ವೆಂಕಣ್ಣಯ್ಯ ಟಿ. ಎಸ್. & ಕೃಷ್ಣಶಾಸ್ತ್ರೀ ಎ. ಆರ್. , (2017), ಹರಿಶ್ಚಂದ್ರ ಕಾವ್ಯ ಸಂಗ್ರಹ, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ, ಮೈಸೂರು.

Downloads

Published

05.05.2025

How to Cite

ರಾಘವೇಂದ್ರ ಕುಪ್ಪೇಲೂರ. (2025). ಹರಿಶ್ಚಂದ್ರಚಾರಿತ್ರದ ಹೊಲತಿಯರ ಪ್ರಸಂಗ: ದಲಿತ ಪ್ರಜ್ಞೆಯ ಟಿಪ್ಪಣಿ. ಅಕ್ಷರಸೂರ್ಯ (AKSHARASURYA), 6(03), 29 to 40. Retrieved from https://aksharasurya.com/index.php/latest/article/view/625

Issue

Section

ಸಂಶೋಧನಾ ಲೇಖನಗಳು. | RESEARCH ARTICLE.