ಕನ್ನಡ ಸಾಹಿತ್ಯದಲ್ಲಿ ಆಧುನಿಕೋತ್ತರ ಸಮಸ್ಯೆಗಳು ಮತ್ತು ಸವಾಲುಗಳು

Main Article Content

ಎಂ.ಆರ್. ದೊಡಮನಿ

Abstract

ಕನ್ನಡ ಸಾಹಿತ್ಯವು ಸಹಸ್ರಾರು ವರ್ಷಗಳ ಇತಿಹಾಸ ಹೊಂದಿದ ಸಮೃದ್ಧ ಪರಂಪರೆಯಾಗಿದ್ದು, ಪ್ರಾಚೀನ ಜೈನ–ವೀರಶೈವ ಸಾಹಿತ್ಯದಿಂದ ಆರಂಭಿಸಿ ಭಕ್ತಿ, ನವೋದಯ, ಪ್ರಗತಿಶೀಲ, ನವ್ಯ ಹಾಗೂ ದಲಿತ ಸಾಹಿತ್ಯದವರೆಗೆ ಕಾಲಕಾಲಕ್ಕೆ ಸಮಾಜದ ಬದಲಾವಣೆಗಳನ್ನು ಪ್ರತಿಬಿಂಬಿಸುತ್ತ ಬಂದಿದೆ. ಇಪ್ಪತ್ತನೇ ಶತಮಾನದ ಉತ್ತರಾರ್ಧದಲ್ಲಿ ಉದಯವಾದ ಆಧುನಿಕೋತ್ತರ (Post-modern) ಯುಗವು ಕನ್ನಡ ಸಾಹಿತ್ಯಕ್ಕೆ ಹೊಸ ದೃಷ್ಟಿಕೋನ, ಹೊಸ ಭಾಷಾ ವಿನ್ಯಾಸ ಮತ್ತು ಹೊಸ ಸವಾಲುಗಳನ್ನು ತಂದಿದೆ. ಸ್ಥಿರ ಮೌಲ್ಯಗಳ ನಿರಾಕರಣೆ, ಬಹುಸ್ವರತೆಯ ಕಥನ, ಅಸ್ಪಷ್ಟತೆ ಹಾಗೂ ವ್ಯಂಗ್ಯ ಇತ್ಯಾದಿಗಳು ಈ ಯುಗದ ಪ್ರಮುಖ ಲಕ್ಷಣಗಳಾಗಿವೆ. ಇದರ ಪರಿಣಾಮವಾಗಿ ಒಂದು ಕಡೆ ಸೃಜನಶೀಲ ಸ್ವಾತಂತ್ರ್ಯ ವಿಸ್ತಾರಗೊಂಡರೆ, ಇನ್ನೊಂದು ಕಡೆ ಓದುಗರ ಆಸಕ್ತಿ ಮತ್ತು ಸಂಖ್ಯೆ ಕುಸಿಯುತ್ತಿರುವುದು ಗಮನಾರ್ಹವಾಗಿದೆ. ಮಾಧ್ಯಮಗಳ ಪ್ರಾಬಲ್ಯ, ವಾಣಿಜ್ಯೀಕರಣ ಮತ್ತು ಓದುವ ಸಂಸ್ಕೃತಿಯ ಕುಗ್ಗುವಿಕೆ ಇಂದಿನ ಕನ್ನಡ ಸಾಹಿತ್ಯ ಎದುರಿಸುತ್ತಿರುವ ಪ್ರಮುಖ ಸವಾಲುಗಳಾಗಿವೆ ಎಂಬುದನ್ನು ಈ ಅಧ್ಯಯನ ವಿಶ್ಲೇಷಿಸುತ್ತದೆ.

Article Details

Section

Research Articles

Author Biography

ಎಂ.ಆರ್. ದೊಡಮನಿ

ಕನ್ನಡ ಸಹ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು & ಸ್ನಾತಕೋತ್ತರ ಪದವಿ ಕೇಂದ್ರ, ರಾಮದುರ್ಗ.

References

ಹಳ್ಳಕೇರಿ ಎಫ್.ಟಿ. (ಸಂ), (2001), ದಶಕದ ಕನ್ನಡ ಸಾಹಿತ್ಯ, ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ.

ನರಸಿಂಹೇಗೌಡ ನಾರಾಯಣಪೂರ ಮತ್ತು ಕೋಗಿಲಹಳ್ಳಿ ಕೃಷ್ಣಪ್ಪ (ಸಂ), (2010), ಕಾವ್ಯ ಕೃಷಿಕ, ಬೆಂಗಳೂರು: ಕರ್ನಾಟಕ ಜಾನಪದ ಪರಿಷತ್ತು.

ರಾಜಪ್ಪ ದಳವಾಯಿ (ಸಂ), (1999), ಕನ್ನಡ ಸಾಹಿತ್ಯ ಕೋಶ, ಬೆಂಗಳೂರು: ದಳವಾಯಿ ಪ್ರಕಾಶನ.

ಮುಗಳಿ ರಂ.ಶ್ರೀ., (2008), ಕನ್ನಡ ಸಾಹಿತ್ಯ ಚರಿತ್ರೆ, ಧಾರವಾಡ: ಸಮಾಜ ಪುಸ್ತಕಾಲಯ.

ವೀರಣ್ಣ ರಾಜೂರ (ಸಂ), (2002), ಮುತ್ತಿನ ಹಾರ, ಧಾರವಾಡ: ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ.

ಪಾನಬುಡೆ ಎಸ್. ಎಂ. ಮತ್ತು ಹೊಸಮನಿ ವೈ. ಎಸ್. (ಸಂ), (2012), ಸಾಹಿತ್ಯ ಸಂಗಾತಿ-2, ಬೆಳಗಾವಿ: ಪ್ರಸಾರಾಂಗ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ.

ಕೇಶವಶರ್ಮ ಕೆ., (2008), ಆಧುನಿಕೋತ್ತರವಾದ: ಇತಿಹಾಸ ಮತ್ತು ಸಂಘರ್ಷ, ಬೆಂಗಳೂರು: ಅಭಿನವ ಪ್ರಕಾಶನ.

ಸನದಿ ಬಿ. ಎ., (1995), ಸೂರ್ಯಪಾನ, ಮುಂಬಯಿ: ಭಾವನಾ ಪ್ರಕಾಶನ.