ಆಧುನಿಕೋತ್ತರ ಕಾಲದ ಮಹಿಳೆಯರ ಸಂವೇದನೆ

Main Article Content

ಎಂ. ನಂಜುಂಡಸ್ವಾಮಿ

Abstract

ಆಧುನಿಕೋತ್ತರ ಕಾಲಘಟ್ಟದಲ್ಲಿ ಮಹಿಳಾ ಸಂವೇದನೆಯು ಪಾರಂಪರಿಕ ಮೌನವನ್ನು ಮುರಿದು, ಪ್ರತಿರೋಧದ ಮತ್ತು ಅಸ್ತಿತ್ವದ ದೃಢವಾದ ದನಿಗೂಡಿಸಿದೆ. 1960ರ ದಶಕದ ನಂತರದ ಸಾಹಿತ್ಯಿಕ ಮತ್ತು ಬೌದ್ಧಿಕ ಬದಲಾವಣೆಗಳು ಸ್ತ್ರೀಯರ ಅನುಭವಗಳಿಗೆ ಹೊಸ ಆಯಾಮವನ್ನು ನೀಡಿವೆ. ಪಿತೃಪ್ರಧಾನ ವ್ಯವಸ್ಥೆ, ಕೌಟುಂಬಿಕ ದೌರ್ಜನ್ಯ ಮತ್ತು ಧಾರ್ಮಿಕ ಕಟ್ಟುಪಾಡುಗಳ ವಿರುದ್ಧದ ಸಂಘರ್ಷವು ಇಲ್ಲಿ ಪ್ರಧಾನವಾಗಿ ವ್ಯಕ್ತವಾಗಿದೆ. ಕೇವಲ ಸಹನಶೀಲರಾಗಿ ಉಳಿಯದೆ, ಸ್ತ್ರೀಯರು ತಮ್ಮ ಹಕ್ಕು, ಘನತೆ ಮತ್ತು ಸ್ವಾಯತ್ತತೆಗಾಗಿ ನಡೆಸುವ ಬೌದ್ಧಿಕ ಹೋರಾಟವನ್ನು ಕನ್ನಡದ ಪ್ರಮುಖ ಲೇಖಕಿಯರ ಕೃತಿಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸಲಾಗಿದೆ. ದೇಹ ರಾಜಕೀಯ ಮತ್ತು ಲೈಂಗಿಕತೆಯ ಕುರಿತಾದ ಮುಕ್ತ ಚರ್ಚೆಗಳು ಸ್ತ್ರೀವಾದಿ ಚಿಂತನೆಗೆ ಹೊಸ ಬುನಾದಿ ಹಾಕಿದ್ದು, ಸಾಹಿತ್ಯವು ಮಹಿಳಾ ಬದುಕಿನ ಸಂಕೀರ್ಣತೆಗಳನ್ನು ಮತ್ತು ಆತ್ಮವಿಶ್ವಾಸದ ಹೆಜ್ಜೆಗಳನ್ನು ಸಮರ್ಥವಾಗಿ ದಾಖಲಿಸಿದೆ.

Article Details

Section

Research Articles

Author Biography

ಎಂ. ನಂಜುಂಡಸ್ವಾಮಿ

ಸಹಾಯಕ ಪ್ರಾಧ್ಯಾಪಕ, ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯ, ಬಾಗಲಕೋಟೆ.

 

References

ವಿಜಯಾ ದಬ್ಬೆ, (1989), ಮಹಿಳಾ ಸಾಹಿತ್ಯದಲ್ಲಿ ಪ್ರತಿಭಟನೆ, ಮೈಸೂರು: ರಚನಾ ಪ್ರಕಾಶನ.

ಸರ್ವಮಂಗಳಾ ಚ., (1975), ಮಹಿಳೆ ಮತ್ತು ಕನ್ನಡ ಸಾಹಿತ್ಯ, ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ.

ಕರ್ನಾಟಕ ಸಾಹಿತ್ಯ ಅಕಾಡೆಮಿ (ಸಂ), (1998), ಕನ್ನಡ ಸಾಹಿತ್ಯ ಮತ್ತು ಸ್ತ್ರೀವಾದ ಚಿಂತನೆ (ಸ್ತ್ರೀವಾದ), ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ.

ಗಾಯತ್ರಿ ಎನ್., (1985), ಮಹಿಳೆ: ಬಿಡುಗಡೆ ಹಾದಿಯಲ್ಲಿ, ಬೆಂಗಳೂರು: ನವಕರ್ನಾಟಕ ಪ್ರಕಾಶನ.