ಸಾಮಾಜಿಕ ನ್ಯಾಯಕ್ಕಾಗಿ ಮಿಡಿದ ಕೊಲ್ಹಾಪುರದ ರಾಜರ್ಷಿ ಶಾಹು ಮಹಾರಾಜ
Main Article Content
Abstract
ನಾಲ್ವಡಿ ಕೃಷ್ಣರಾಜ ಒಡೆಯರ ಸಮಕಾಲೀನರಾದ ಕೊಲ್ಹಾಪುರದ ರಾಜರ್ಷಿ ಶಾಹು ಮಹಾರಾಜರು ಭಾರತೀಯ ಸಾಮಾಜಿಕ ಇತಿಹಾಸದಲ್ಲಿ ‘ಸಾಮಾಜಿಕ ನ್ಯಾಯ’ದ ಹರಿಕಾರರಾಗಿ ಗುರುತಿಸಿಕೊಂಡಿದ್ದಾರೆ. ವೈಯಕ್ತಿಕವಾಗಿ ಅನುಭವಿಸಿದ ‘ವೇದೋಕ್ತ’ ಪ್ರಕರಣದ ಅವಮಾನವನ್ನೇ ಸಾಮಾಜಿಕ ಕ್ರಾಂತಿಯನ್ನಾಗಿ ಪರಿವರ್ತಿಸಿದ ಇವರು, ಬ್ರಾಹ್ಮಣೇತರ ಮತ್ತು ದಲಿತ ವರ್ಗಗಳ ವಿಮೋಚನೆಗಾಗಿ ಶಿಕ್ಷಣವನ್ನು ಪ್ರಬಲ ಅಸ್ತ್ರವನ್ನಾಗಿ ಬಳಸಿದರು. ತಮ್ಮ ಸಂಸ್ಥಾನದಲ್ಲಿ ಉಚಿತ ಮತ್ತು ಕಡ್ಡಾಯ ಶಿಕ್ಷಣ, ವಿದ್ಯಾರ್ಥಿವೇತನ ಹಾಗೂ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಜಾರಿಗೊಳಿಸುವ ಮೂಲಕ ಸಮಸಮಾಜದ ನಿರ್ಮಾಣಕ್ಕೆ ಬುನಾದಿ ಹಾಕಿದರು. ಅಸ್ಪೃಶ್ಯತೆ ನಿವಾರಣೆ, ಮಹಿಳಾ ಹಕ್ಕುಗಳ ರಕ್ಷಣೆ, ದೇವದಾಸಿ ಪದ್ಧತಿ ನಿಷೇಧ ಹಾಗೂ ಅಂತರ್ಜಾತಿ ವಿವಾಹಗಳಿಗೆ ಕಾನೂನಿನ ಮಾನ್ಯತೆ ನೀಡುವ ಮೂಲಕ, ಡಾ. ಬಿ.ಆರ್. ಅಂxಬೇಡ್ಕರ್ ಅವರ ಸಂವಿಧಾನಾತ್ಮಕ ಮೀಸಲಾತಿ ಮತ್ತು ಸಾಮಾಜಿಕ ಸಮಾನತೆಯ ಆಶಯಗಳಿಗೆ ಇವರು ಮುನ್ನುಡಿ ಬರೆದರು.
Article Details
Section

This work is licensed under a Creative Commons Attribution-NonCommercial-ShareAlike 4.0 International License.
References
ಚಂದ್ರಶೇಖರ ಎಸ್. ಮತ್ತು ಸುರೇಂದ್ರರಾವ್ ಬಿ. (ಸಂ), (2016), ಕರ್ನಾಟಕದ ಸಾಮಾಜಿಕ ಮತ್ತು ಆರ್ಥಿಕ ಚರಿತ್ರೆಯ ಕೆಲವು ನೆಲೆಗಳು (ಸಂಪುಟ 10), ಬೆಂಗಳೂರು: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ.
ವಿಜಯ ಪೂಣಚ್ಚ ತಂಬಂಡ ಮತ್ತು ಚಿನ್ನಸ್ವಾಮಿ ಸೋಸಲೆ ಎನ್. (ಸಂ), (2010), ಸಮಕಾಲೀನ ಕರ್ನಾಟಕ ಚರಿತ್ರೆಯ ವಿವಿಧ ಆಯಾಮಗಳು, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.
ಚಂದ್ರಶೇಖರ ಟಿ.ಆರ್., (2023), ಭಾರತದಲ್ಲಿ ಮೀಸಲಾತಿ ಇತಿಹಾಸ ಮತ್ತು ಮಿಲ್ಲರ್ ಸಮಿತಿ ವರದಿ: ಒಂದು ಅಧ್ಯಯನ, ಬೆಂಗಳೂರು: ನವಕರ್ನಾಟಕ ಪ್ರಕಾಶನ.
ಅನುಪಮಾ ಎಚ್.ಎಸ್., (2018), ವಿಮೋಚಕನ ಹೆಜ್ಜೆಗಳು, ಗದಗ: ಲಡಾಯಿ ಪ್ರಕಾಶನ.
ಜಯಸಿಂಗ್ ಪವಾರ (ಮೂಲ) ಮತ್ತು ಪ್ರೊ. ಹನುಮಂತು (ಅನುವಾದ), (2018), ಸಾಮಾಜಿಕ ಕ್ರಾಂತಿಕಾರಿ ರಾಜ ರಾಜರ್ಷಿ ಶಾಹು ಛತ್ರಪತಿ (ಸಂಪುಟ 1 ಮತ್ತು 2), ಬೆಂಗಳೂರು: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ.
ಧನಂಜಯ ಕೀರ್ (ಮೂಲ) ಮತ್ತು ಡಾ. ಜೆ.ಪಿ. ದೊಡಮನಿ (ಅನುವಾದ), (2018), ರಾಜರ್ಷಿ ಶಾಹೂ ಛತ್ರಪತಿ, ತೇರದಾಳ: ಸುಶೀಲ್ ಪ್ರಕಾಶನ.
ಅನುಪಮಾ ಎಚ್.ಎಸ್., (2020), ಛತ್ರಪತಿ ಶಾಹೂ, ಗದಗ: ಲಡಾಯಿ ಪ್ರಕಾಶನ.
ಶ್ಯೋರಾಜ್ ಸಿಂಗ್ ಬೆಚೈನ್ (ಮೂಲ), ರೇಣುಕಾ ನಿಡಗುಂದಿ ಮತ್ತು ರಮೇಶ ಅರೋಲಿ (ಅನುವಾದ), (2025), ಮಾತಿಲ್ಲದವರ ಮರುದನಿಯಾಗಿ ಮೂಕನಾಯಕ (ಮೂಕನಾಯಕ ಪತ್ರಿಕೆಯ ಸಂಪಾದಕೀಯಗಳು), ಶಿವಮೊಗ್ಗ: ಅಹರ್ನಿಶಿ ಪ್ರಕಾಶನ.
ಪವಾರ ಗೋ.ಮಾ. (ಮೂಲ) ಮತ್ತು ಚಂದ್ರಶೇಖರ ಪೋಕಳೆ (ಅನುವಾದ), (2015), ಮಹರ್ಷಿ ವಿಠ್ಠಲ ರಾಮಜಿ ಶಿಂಧೆ: ಜೀವನ ಮತ್ತು ಕಾರ್ಯ, ನವದೆಹಲಿ: ಸಾಹಿತ್ಯ ಅಕಾಡೆಮಿ.
ಬಾಬಾಸಾಹೇಬ್ ಅಂಬೇಡ್ಕರ್, (2015), ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರಹಗಳು ಮತ್ತು ಭಾಷಣಗಳು, ಬೆಂಗಳೂರು: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ.
ಪೋತೆ ಎಚ್.ಟಿ., (2013), ಸ್ವಾತಂತ್ರ್ಯ ಪೂರ್ವದ ದಲಿತ ಚಳುವಳಿ, ಧಾರವಾಡ: ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ.