ಅನುಭಾವಿಕ ಹಿನ್ನೆಲೆಯಲ್ಲಿ ಮಾಸ್ತಿಯವರ ಸಣ್ಣ ಕತೆಗಳು ಮತ್ತು ಸಮಕಾಲೀನತೆ

Main Article Content

ಶೈಲಜ ವಿ.

Abstract

ಕನ್ನಡ ಸಣ್ಣಕಥಾ ಸಾಹಿತ್ಯಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಮಾಸ್ತಿ ವೆಂಕಟೇಶ ಅಯ್ಯಂಗಾರರು, ತಮ್ಮ ವಿಶಿಷ್ಟ ಕಥನ ಕಲೆಯ ಮೂಲಕ ‘ಸಣ್ಣಕಥೆಗಳ ಜನಕ’ ಎನಿಸಿಕೊಂಡಿದ್ದಾರೆ. ಅವರು ರಚಿಸಿದ ಸಾಮಾಜಿಕ, ಐತಿಹಾಸಿಕ ಮತ್ತು ಪೌರಾಣಿಕ ಕಥೆಗಳು ಕೇವಲ ಮನರಂಜನೆಗೆ ಸೀಮಿತವಾಗದೆ, ಬದುಕಿನ ಗಂಭೀರ ಮೌಲ್ಯಗಳನ್ನು ಮತ್ತು ಮಾನವೀಯತೆಯ ಘನತೆಯನ್ನು ಎತ್ತಿಹಿಡಿಯುತ್ತವೆ. ಸರಳ ನಿರೂಪಣೆ ಮತ್ತು ಆಪ್ತವಾದ ಪಾತ್ರಗಳ ಮೂಲಕ ಸಮಕಾಲೀನ ಬದುಕಿನ ಸಂಕೀರ್ಣತೆಗಳಿಗೆ ಪರಿಹಾರ ಕಂಡುಕೊಳ್ಳುವ ಬಗೆಯನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಜಾತಿ, ಮತ ಮತ್ತು ಕಾಲದ ಹಂಗಿಲ್ಲದೆ, ಮನುಷ್ಯತ್ವಕ್ಕೆ ಮೊದಲ ಆದ್ಯತೆ ನೀಡುವ ಮಾಸ್ತಿಯವರ ಜೀವನದೃಷ್ಟಿ ಇಂದಿನ ಸಮಾಜಕ್ಕೆ ಅತ್ಯಂತ ಪ್ರಸ್ತುತವಾಗಿದೆ. ಸಾಂಪ್ರದಾಯಿಕ ಚೌಕಟ್ಟನ್ನು ಮೀರಿ ನಿಲ್ಲುವ ಅವರ ಕಥಾ ಪಾತ್ರಗಳು ಮತ್ತು ಅವುಗಳ ಅನುಭಾವಿಕ ನೆಲೆಗಳನ್ನು ಇಲ್ಲಿ ಗುರುತಿಸಲಾಗಿದೆ.

Article Details

Section

Research Articles

Author Biography

ಶೈಲಜ ವಿ.

ಸಂಶೋಧನಾ ವಿದ್ಯಾರ್ಥಿ, ಬೆಂ.ಉ.ವಿ.ವಿ., ಟಮಕ, ಕೋಲಾರ.

How to Cite

ಶೈಲಜ ವಿ. (2026). ಅನುಭಾವಿಕ ಹಿನ್ನೆಲೆಯಲ್ಲಿ ಮಾಸ್ತಿಯವರ ಸಣ್ಣ ಕತೆಗಳು ಮತ್ತು ಸಮಕಾಲೀನತೆ. ಅಕ್ಷರಸೂರ್ಯ (AKSHARASURYA), 13(02), 26 to 32. https://aksharasurya.com/index.php/latest/article/view/521

References

ಶೇಷಗಿರಿರಾವ್ ಎಲ್.ಎಸ್., (2017), ಹೊಸಗನ್ನಡ ಸಾಹಿತ್ಯ ಚರಿತ್ರೆ, ಬೆಂಗಳೂರು: ಅಂಕಿತ ಪ್ರಕಾಶನ.

ಸಿದ್ದಲಿಂಗಯ್ಯ ಜಿ.ಎಸ್. ಮತ್ತು ಕೃಷ್ಣಯ್ಯ ಎಂ.ಎಚ್., (2021), ಸಾಲುದೀಪಗಳು, ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ.

ಸತ್ಯನಾರಾಯಣ ಎಚ್.ಎಸ್., (2024), ನಗೆಮೊಗದಜ್ಜ ಮಾಸ್ತಿ, ಬೆಂಗಳೂರು: ಆಲಂಪು ಪ್ರಕಾಶನ.

ಮಾಸ್ತಿ ವೆಂಕಟೇಶ ಅಯ್ಯಂಗಾರ್, (2017), ಸಣ್ಣಕಥೆಗಳು ಸಮಗ್ರ ಭಾಗ-1, ಬೆಂಗಳೂರು: ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜೀವನ ಕಾರ್ಯಾಲಯ ಟ್ರಸ್ಟ್.

ಮಾಸ್ತಿ ವೆಂಕಟೇಶ ಅಯ್ಯಂಗಾರ್, (2017), ಸಣ್ಣಕಥೆಗಳು ಸಮಗ್ರ ಭಾಗ-2, ಬೆಂಗಳೂರು: ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜೀವನ ಕಾರ್ಯಾಲಯ ಟ್ರಸ್ಟ್.

ಮಾಸ್ತಿ ವೆಂಕಟೇಶ ಅಯ್ಯಂಗಾರ್, (2017), ಸಣ್ಣಕಥೆಗಳು ಸಮಗ್ರ ಭಾಗ-3, ಬೆಂಗಳೂರು: ಮಾಸ್ತಿ ವೆಂಕಟೇಶ ಅಯ್ಯಂಗಾರ್ ಜೀವನ ಕಾರ್ಯಾಲಯ ಟ್ರಸ್ಟ್.

ಹೊನ್ನಯ್ಯ ಸಿ.ಬಿ. (ಸಂ), (2008), ಕನ್ನಡ ಸಾಹಿತ್ಯ ಸಂಸ್ಕೃತಿ ಮೀಮಾಂಸೆ, ಬೆಂಗಳೂರು: ಜೈಭೀಮ್ ಪ್ರಕಾಶನ.

ಬಸವಾರಾಧ್ಯ ಎನ್. (ಸಂ), (1992), ಮಾಸ್ತಿ ಕಥಾ ಸಮೀಕ್ಷೆ, ಬೆಂಗಳೂರು: ಬಿ.ಎಂ.ಶ್ರೀ. ಸ್ಮಾರಕ ಪ್ರತಿಷ್ಠಾನ.

ದಂಡಪ್ಪ ಹೆಚ್. ಮತ್ತು ಸುಮಿತ್ರಾಬಾಯಿ ಬಿ.ಎನ್. (ಸಂ), (2006), ಸುವರ್ಣ ಸಾಹಿತ್ಯ ವಿಮರ್ಶೆ, ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ (ಸುವರ್ಣ ಕರ್ನಾಟಕ ಯೋಜನೆ).

Most read articles by the same author(s)