ಧ್ವನಿ ಬದಲಾವಣೆ ಮತ್ತು ಆರ್ಥಿಕ ತತ್ವ (ಉತ್ತರ ಕರ್ನಾಟಕ ಜಿಲ್ಲೆಗಳನ್ನು ಅನುಲಕ್ಷಿಸಿ)
Main Article Content
Abstract
ಕರ್ನಾಟಕದಲ್ಲಿ ಬಳಕೆಯಲ್ಲಿರುವ ಕನ್ನಡ ಭಾಷೆಯನ್ನು ಆಯಾ ಪ್ರದೇಶಗಳಲ್ಲಿ ಬಳಕೆಯಲ್ಲಿರುವ ಕನ್ನಡವನ್ನು ಧ್ವನಿ ವ್ಯತ್ಯಾಸಗಳ ಆಧಾರದ ಮೇಲೆ ಪ್ರಾದೇಶಿಕ ಉಪಭಾಷೆ ಎಂದು ಗುರುತಿಸುವ ಪದ್ಧತಿ ಸಾವಿರ ವರ್ಷಗಳ ಹಿಂದಿನಿಂದಲೇ ನಡೆದುಕೊಂಡು ಬಂದಿದೆ. ಕವಿರಾಜ ಮಾರ್ಗಕಾರನ ಕಾಲದಲ್ಲಿಯೆ ಕರ್ನಾಟಕದಲ್ಲಿ ಹಲವು ಕನ್ನಡಗಳಿದ್ದವು. ಇಂದಿನಂತೆ ಅಂದೂ ಆಯಾ ಕನ್ನಡ ಪ್ರದೇಶಗಳ ಮೇಲೆ ಅನ್ಯ ಭಾಷೆಗಳ ಪ್ರಭಾವವಿತ್ತು. ಅವರು ಉಚ್ಚರಿಸುವ ಧ್ವನಿಗಳಲ್ಲಿ ವ್ಯತ್ಯಾಸವಿದ್ದರೂ ಅವು ಪರಸ್ಪರರಿಗೆ ಅರ್ಥವಾಗುತ್ತಿದ್ದವು . ಅದರಲ್ಲಿ ಶುದ್ಧ (ತಿರುಳು) ಕನ್ನಡವು ಒಕ್ಕುಂದ, ಕೊಪಣನಗರ, ಪುಲಿಗೆರೆ ಮತ್ತು ಕಿಸುವಳಲು ಪ್ರದೇಶಗಳಲ್ಲಿ ಬಳಕೆಯಲ್ಲಿತ್ತು. ಇವುಗಳಲ್ಲಿ ಕನ್ನಡ ಸಾಹಿತ್ಯ ರಚನೆಗೆ ಈ ತಿರುಳುಗನ್ನಡವೆ ಸೂಕ್ತವಾಗಿತ್ತು ಎಂದು ಹೇಳಿದ್ದಾನೆ. ಮುಂಬರುವ ನಯಸೇನ ಮತ್ತು ಚಂದ್ರರಾಜರು (12ನೇ ಶತಮಾನ) ತಮ್ಮ ಕಾವ್ಯಗಳ ಭಾಷೆ ಪೊಸಗನ್ನಡವೆಂದು ಹೇಳಿದರೆ ಆಂಡಯ್ಯನು (13ನೆಯ ಶತಮಾನ) ತನ್ನ ಕಾವ್ಯದ ಭಾಷೆಯನ್ನು ಅಚ್ಚಗನ್ನಡವೆಂದು ಕರೆದಿದ್ದಾನೆ. ಹೀಗೆ ಕ್ರಿ.ಶ 9 ರಿಂದಕ್ರಿ.ಶ 13 ರ ವರೆಗಿನ ನಾಲ್ಕು ಶತಮಾನಗಳ ಅವಧಿಯಲ್ಲಿ ಹಳೆಗನ್ನಡ, ತಿರುಳುಗನ್ನಡ, ಹೊಸಗನ್ನಡ ಮತ್ತು ಅಚ್ಚಗನ್ನಡ ಎಂಬ ನಾಲ್ಕು ಅವಸ್ಥಾಬೇಧಗಳ ಮಾತುಗಳು ಬಂದು ಹೋಗಿವೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಡಿ.ಎನ್.ಶಂಕರಭಟ್ಟ, ಮಾತಿನ ಒಳಗುಟ್ಟು (2008), ಬಾಶಾ ಪ್ರಕಾಶನ, ಹೆಗ್ಗೋಡು, ಸಾಗರ.
ಡಿ.ಎನ್.ಶಂಕರಭಟ್ಟ. ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ (2006), ಬಾಶಾ ಪ್ರಕಾಶನ, ಹೆಗ್ಗೋಡು, ಸಾಗರ.
ಡಿ.ಎನ್.ಶಂಕರಭಟ್ಟ. ಕನ್ನಡದ ಸರ್ವನಾಮಗಳು (2003), ಮಾನಸಗಂಗೋತ್ರಿ, ಮೈಸೂರು.
ಸಂಗಮೇಶ ಸವದತ್ತಿಮಠ ದ್ರಾವಿಡ ಭಾಷಾ ವ್ಯಾಸಂಗ (2004), ರೂಪರಶ್ಮಿ ಪ್ರಕಾಶನ, ಧಾರವಾಡ.
ರಾಜೇಶ್ವರಿ ಮಹೇಶ್ವರಯ್ಯ, ವರ್ಣನಾತ್ಮಕ ಭಾಷಾ ವಿಜ್ಞಾನ (1992), ಸಮಾಜ ಪುಸ್ತಕಾಲಯ, ಧಾರವಾಡ.
ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ವ್ಯಾಕರಣ ದರ್ಪಣ (2015), ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.
ಸಾರ್ಥಕ: ಪ್ರೊ. ಎಂ. ಮರಿಯಪ್ಪ ಭಟ್ ಸಂಸ್ಮರಣ ಗ್ರಂಥ (1995), ಪ್ರೊ. ಎಂ. ಮರಿಯಪ್ಪ ಭಟ್ ಸಂಸ್ಮರಣ ಸಮಿತಿ, ಮೈಲಾಪುರ, ಮದ್ರಾಸ್.