ವೈದ್ಯಕೀಯ ಪದವಿಗಾಗಿ ಹೋರಾಡಿದ ಮೊದಲ ಮಹಿಳೆ ಕದಂಬಿನಿ ಗಂಗೂಲಿ

Main Article Content

ಮಾರುತಿ ಹೆಚ್.

Abstract

ಬ್ರಿಟಿಷರ ಆಳ್ವಿಕೆ ಕಾಲದಲ್ಲಿ ಪುರುಷ ಪ್ರಧಾನ ಸಮಾಜವನ್ನು ಮೆಟ್ಟು ನಿಂತು ಪದವಿ ಪಡೆದ ಭಾರತದ ಮೊದಲ ಇಬ್ಬರು ಮಹಿಳಾ ಪದವೀಧರರಲ್ಲಿ ಒಬ್ಬರು ಕದಂಬಿನಿ ಗಂಗೂಲಿ. ದಕ್ಷಿಣ ಏಷ್ಯಾದ ಮೊದಲ ಮಹಿಳಾ ವೈದ್ಯೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕದಂಬಿನಿ ಗಂಗೂಲಿ ಇಂಗ್ಲಿಷ್ ಶಿಕ್ಷಣವನ್ನು ಪಡೆಿದರು. ಮೊದಲು ಢಾಕಾದ ಬ್ರಹ್ಮ ಈಡನ್ ಸ್ತ್ರೀ ಶಾಲೆಯಲ್ಲಿ ಮತ್ತು ನಂತರ ಕಲ್ಕತ್ತದ ಬ್ಯಾಲಿಗಂಜ್ ನ ಹಿಂದೂ ಮಹಿಳಾ ವಿಶ್ವವಿದ್ಯಾಲಯದಲ್ಲಿ, ಎರಡನೇ ಶಾಲೆಯನ್ನು 1870ರಲ್ಲಿ ಬಾಂಗಾ ಮಹಿಳಾ ವಿದ್ಯಾಲಯ ಎಂದು ಮರು ನಾಮಕರಣ ಮಾಡಲಾಯಿತು. ಎರಡು ವರ್ಷಗಳ ನಂತರ ಬೆಥನ್ ಶಾಲೆಯೊಂದಿಗೆ ವಿಲೀನಗೊಂಡಿತು. ತನ್ನ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ (CU) ಪ್ರವೇಶ ಪರೀಕ್ಷೆಗೆ ಹಾಜರಾಗಲು ಬಯಸಿದ್ದರು. ಆದರೆ ವಿಶ್ವವಿದ್ಯಾಲಯವು ಇನ್ನೂ ಮಹಿಳಾ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುತ್ತಿರಲಿಲ್ಲ. ಕದಂಬಿನಿ ಅವರು ವೈದ್ಯೆಯಾಗಿ ತಮ್ಮ ಕೆಲಸವನ್ನು ಸಾಮಾಜಿಕ ಲೋಕೋಪಕಾರ ಮತ್ತು ರಾಜಕೀಯ ಚಟುವಟಿಕೆಗಳೊಂದಿಗೆ ಸಂಯೋಜಿಸಿದರು. ಸಂಪ್ರದಾಯವಾದಿ ಸಮಾಜದಲ್ಲಿ ಮಹಿಳೆಯರ ಹಕ್ಕುಗಳಿಗಾಗಿ ಸಕ್ರಿಯವಾಗಿ ಹೋರಾಟ ನಡೆಸಿದರು. ಮಹಿಳೆಯರ ಹಕ್ಕುಗಳಿಗಾಗಿ ಪ್ರಚಾರ ಮಾಡಿದರು. ಅವರು 1889 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಐದನೇ ಅಧಿವೇಶನದ ಆರು ಮಹಿಳಾ ಪ್ರತಿನಿಧಿಗಳಲ್ಲಿ ಒಬ್ಬರಾಗಿದ್ದರು. ಒಟ್ಟಾರೆ ಮಹಿಳೆಯರ ವಿಮೋಚನೆ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಅವರಿಗಿರುವ ನಿಬರ್ಂಧಗಳ ವಿರುದ್ಧ ಹೋರಾಟ ನಡೆಸಿದ ಮಹಾನ್ ಮಹಿಳಾ ಚಿಂತಕಿಯಾಗಿದ್ದಾರೆ.

Article Details

Section

Research Articles

Author Biography

ಮಾರುತಿ ಹೆಚ್.

ನಂ.117, 3ನೇ ಮುಖ್ಯ ರಸ್ತೆ, 3ನೇ ಅಡ್ಡರಸ್ತೆ, ಸಿದ್ದಾರ್ಥ ರಸ್ತೆ, ದೀಪಾಂಜಲಿ ನಗರ, ಬೆಂಗಳೂರು.

References

ಗಾಯಿತ್ರಿ ಪೊನ್ವಣ್ಣನ್, ಅನ್ ಸ್ಟಾಪಬಲ್ 75 ಸ್ಟೋರೀಸ್ ಆಫ್ ಟ್ರಯಲ್ ಬ್ಲೆಸಿಂಗ್ ಇಂಡಿಂಮನ್ ವುಮನ್ (2019), ಹ್ಯಾಚೆಟ್ ಇಂಡಿಯಾ ಪಬ್ಲಿಕೇಷನ್.

ನೀಲಂ ಕುಮಾರ್, ವುಮೆನ್ ಅಂಡ್ ಸೈನ್ಸ್ ಇನ್ ಇಂಡಿಯಾ (2009), ಮಿಚಿಗನ್ ಯುನಿವರ್ಸಿಟಿ. ಆಕ್ಸ್ ಫರ್ಡ್ ಯುನಿವರ್ಸಿಟಿ ಪ್ರೆಸ್, ಪೇಜ್-6.

ಅದಿತಿ ಚಂದ್ರ, ದಿ ನ್ಯಾಷನಲ್ ಅಂಡ್ ಹಿಟ್ಸ್ ಮಾರ್ಜಿನ್ ರಿಥಿಂಕಿಂಗ್ ಕಮ್ಯುನಿಟಿ (2019), ಕೆಂಬ್ರಿಡ್ಜ್ ಸ್ಕಾಲರ್ಸ್ ಪಬ್ಲಿಕೇಷನ್, ಪೇಜ್ 116.

ಸುಜಾತ ಮುಖರ್ಜಿ, ಜೆಂಡರ್ ಮೆಡಿಸಿನ್ ಅಂಡ್ ಸೊಸೈಟಿ ಇನ್ ಕಲೋನಿಯಲ್ ಇಂಡಿಂಇನ್ 19 ಅಂಡ್ ಅರ್ಲಿ 20 ಸೆಂಚುರಿ ಬಂಗಾಲ್ (2017), ಆಕ್ಸಫರ್ಡ್ ಪ್ರೆಸ್, ಪೇಜ್ 50.

ಮಲ್ಲಿಕಾ ಬಸು, ಹಿಸ್ಟರಿ ಆಫ್ ಇಂಡಿಜಿನಿಯಸ್ ಫಾರ್ಮಾಸೆಂಟಿಕಲ್ ಕಂಪನಿಸ್ ಇನ್ ಕೊಲೋನಿಯಲ್ ಕಲ್ಕತ್ತ (2021), ಮನೋಹರ್ ಪಬ್ಲಿಕೇಶನ್, ಪೇಜ್- 31.

ಶ್ರೀ ಜಂತು ದಾಸ್, ಜಂಡರ್ ಇಶೂ ಇನ್ ಸೊಸೈಟಿ ಮಿತ್ ರಿಯಾಲಿಟಿ ಅಂಡ್ ರೆಸ್ಪಾನ್ಸಿಬಲ್ (2018), ಕೃಷ್ಣ ಪಬ್ಲಿಕೇಶನ್ ಹೌಸ್, ಪೇಜ್ 61.

ಶ್ರೀ ಸಾಗರ ಸಿಮ್ಹಾಂಡಿ, ಶ್ರೀ ಕೇಶವಚಂದ್ರ ಘೋಷ್, ರಿವಾಯಿಸಿಟಿಂಗ್ ದಿ ಹಿಸ್ಟರಿ ಆಫ್ ಇಂಡಿಯಾ ಅಂಡ್ ಬಿಹೈಂಡ್, ಆನ್ಸೆನ್ ಗಥಾ, ಪೇಜ್ -176.

ಶೋಭಿತ್ ಆರ್ಯ, ರೀಚಾ ಅನಿರುದ್ಧ, ದಿ ಇಂಡಿಯನ್ ವುಮನ್ (2015) ವಿಸ್ಟಮ್ ಟೀ ಪಬ್ಲಿಕೇಷನ್.

ಗೌರಿ ಶ್ರೀವಾಸ್ತವ, ವುಮನ್ಸ್ ಹೈಯರ್ ಎಜುಕೇಷನ್ ಇನ್ ದಿ ನೈಂಟಿಥ್ ಸೆಂಚುರಿ (2000). ಕಾನ್ಸೆಪ್ಟ್ ಪಬ್ಲಿಕೇಶನ್ ಕಂಪನಿ, ಪೇಜ್ 48.