ಕನಕದಾಸರ ಕೀರ್ತನೆಗಳಲ್ಲಿ ಸಾಮಾಜಿಕ ಚಿಂತನೆ

Main Article Content

ವನಜಾಕ್ಷಿ ಹಳ್ಳಿಯವರ

Abstract

ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ಪ್ರಧಾನವಾದ ಎರಡು ಪ್ರಮುಖ ಭಕ್ತಿಪಂಥಗಳೆಂದರೆ, ಶೈವ ಭಕ್ತಿಪಂಥ ಹಾಗೂ ಶ್ರೀವೈಷ್ಣವ ಭಕ್ತಿಪಂಥಗಳು. ಹನ್ನೆರಡನೇ ಶತಮಾನದ ವಚನಕಾರರು ಶಿವೋಪಾಸಕರಾಗಿದ್ದು, ಸಮಾಜದ ಅಂಕುಡೊಂಕುಗಳನ್ನು ಧಾರ್ಮಿಕ ತಳಹದಿಯ ಮೇಲೆ ತಿದ್ದಲು ಪ್ರಯತ್ನಿಸಿದರೆ, ಕೀರ್ತನಕಾರರು ಶ್ರೀವೈಷ್ಣವ ಭಕ್ತಿಪಂಥವನ್ನು ಮೂಲವಾಗಿರಿಸಿಕೊಂಡು ಸಾಮಾಜಿಕ ಚಿಂತನೆ ನಡೆಸಲು ಪ್ರಯತ್ನಿಸಿದರು. ಕನಕದಾಸರು ಕೀರ್ತನಕಾರರಷ್ಟೇ ಅಲ್ಲ ಉಗಾಭೋಗ ಸುಳಾದಿಗಳನ್ನೂ, ಮೋಹನ ತರಂಗಿಣಿ, ಹರಿಭಕ್ತಸಾರ, ರಾಮಧಾನ್ಯ ಚರಿತ್ರೆ, ನಳಚರಿತ್ರೆ, ನೃಸಿಂಹಸ್ತವ ಎಂಬ ಕೃತಿಗಳನ್ನು, ಬೆಡಗಿನ ವಚನಗಳಂತಹ ಮಂಡಿಗೆಗಳನ್ನು ರಚಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಷ್ಟೊಂದು ವಿಸ್ತಾರವಾದ ಅವರ ಸಾಹಿತ್ಯ ಕೃಷಿಯಲ್ಲಿ ಹೆಚ್ಚು ಕಡಿಮೆ ಧರ್ಮದ ತಳಹದಿಯ ಮೇಲೆ ಸಾಮಾಜಿಕ ಚಿಂತನೆ ಕೇಂದ್ರೀಕೃತಗೊಂಡಿರುವುದು ಗಮನಾರ್ಹ ಸಂಗತಿ. ಪ್ರಸ್ತುತ ಲೇಖನದಲ್ಲಿ ಕನಕದಾಸರ ಕೆಲವು ಪ್ರಮುಖ ಕೀರ್ತನೆಗಳನ್ನು ಕೇಂದ್ರೀಕರಿಸಿ, ಸಾಮಾಜಿಕ ಚಿಂತನೆಗೆ ಅವರು ನೀಡಿದ ಕೊಡುಗೆಯನ್ನು ಕುರಿತು ಅವಲೋಕಿಸುವ ಪ್ರಯತ್ನ ಮಾಡಲಾಗಿದೆ. "ಭಾಗವತ ಮನೋಧರ್ಮದ ಕನಕದಾಸರ ಸಾಮಾಜಿಕ ಚಿಂತನೆ, ಅಧ್ಯಾತ್ಮಿಕ ತಳಹದಿಯ ಮೇಲೆಯೇ ಅನಾವರಣಗೊಳ್ಳುವಂತಹದ್ದು, ದೈತ ಮತಭಾವದ ಹರಿನಾಮಸ್ಮರಣೆಯಿಂದ ಆರಂಭವಾದ ಅವರ ಸಾಧನೆ, ಭಕ್ತಿಯ ಆರ್ದತೆ, ಆತ್ಮಶೋಧನೆ, ಆತ್ಮ ಸಮರ್ಪಣೆ, ಸಾಮಾಜಿಕ ಅಗ್ನಿ ದಿವ್ಯಗಳ ಮೂಲಕ ಹಾಯ್ದು ಅದೈತ ಸಿದ್ದಿಯ ಪರಮಗುರಿಯನ್ನು ತಲುಪಿದೆ.”

Article Details

Section

Research Articles

Author Biography

ವನಜಾಕ್ಷಿ ಹಳ್ಳಿಯವರ

ಪ್ರಾಂಶುಪಾಲರು, ಸರ್ಕಾರಿ ಪ್ರಥಮದರ್ಜೆ ಕಾಲೇಜು, ರಾಜಾಜಿನಗರ, ಬೆಂಗಳೂರು.

References

ಕಾವ್ಯಕಲ್ಪ (2008), ಡಾ. ವನಜಾಕ್ಷಿ ಹಳ್ಳಿಯವರ (ಸಂ), ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು, ಪುಟ. 162.

ಕನಕಾವಲೋಕನ (2012), ಡಾ. ದೇ. ಜವರೇಗೌಡ (ಸಂ), ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು, ಪುಟ. 774.

ಕೀರ್ತನಕಾರರು (2010), ಎಚ್. ಎಸ್. ವೆಂಕಟೇಶ ಮೂರ್ತಿ, ಸಪ್ನ ಬುಕ್ ಹೌಸ್, ಬೆಂಗಳೂರು, ಪುಟ. 77.

ಕನಕಾವಲೋಕನ (2012), ಡಾ. ದೇ. ಜವರೇಗೌಡ (ಸಂ), ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು, ಪುಟ. 799.

ಈಸಬೇಕು ಇದ್ದು ಜೈಸಬೇಕು (1989), ಶ್ಯಾಮಸುಂದರ ಬಿದರಕುಂದಿ (ಸಂ), ಆಲೋಚನ ಪ್ರಕಾಶನ, ಗದಗ, ಪುಟ. XV.

ಕೀರ್ತನೆಗಳ ಸಂಗ್ರಹ, ಶಿವಾನಂದ ಕೆಳಗಿನಮುನಿ (ಸಂ), ಎಸ್.ಬಿ.ಡಿ. ಪ್ರಕಾಶನ, ಪುಟ. 22.