ಟಿ.ವಿ. ಮಾಧ್ಯಮದಲ್ಲಿ ಕನ್ನಡ ಭಾಷೆಯ ಅಸ್ತಿತ್ವ

Main Article Content

ಮೀನಾಕುಮಾರಿ ಎಂ.

Abstract

ಕನ್ನಡ ಭಾಷೆಗೆ ಅತ್ಯಂತ ಪ್ರಾಚೀನ ಇತಿಹಾಸವಿದೆ. ಅನೇಕ ಪ್ರಭಾವಗಳಿಗೆ ಒಳಗಾದರೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿರುವ ಭಾಷೆ ಕನ್ನಡ. ಭಾಷಾ ಬೆಳವಣಿಗೆಯಲ್ಲಿ ಸಾಹಿತ್ಯವು ಹೇಗೆ ಮಹತ್ವವೋ ಹಾಗೆಯೇ ಭಾಷಾ ಬೆಳವಣಿಗೆಯಲ್ಲಿ ಮಾಧ್ಯಮಗಳೂ ತಮ್ಮ ಮಹತ್ವ ಪೂರ್ಣವಾದ ಕೊಡುಗೆಯನ್ನು ನೀಡಿವೆ. ಪತ್ರಿಕೆಗಳು ಕನ್ನಡ ಭಾಷೆ ಉಳಿವು ಮತ್ತು ಬೆಳವಣಿಗೆಗಾಗಿ ಅಪಾರವಾಗಿ ಶ್ರಮಿಸಿವೆ. ಮಾಧ್ಯಮದ ಭಾಷೆಗೆ ಅದರದೇ ಆದ ಪ್ರಾಮುಖ್ಯತೆ ಇದ್ದು ಅದು ಯಾವಾಗಲೂ ತನ್ನ ಗಟ್ಟಿತನವನ್ನು ತೋರಿಸಿದೆ. ಆದರೆ ಇಂದಿನ ಪರಿಸ್ಥಿತಿ ಹಾಗಿಲ್ಲ. ಟಿ.ವಿ. ಮಾಧ್ಯಮಗಳು ಅದರಲ್ಲೂ ಪ್ರಮುಖವಾಗಿ ಸುದ್ದಿವಾಹಿನಿಗಳ ಭಾಷಾ ಬಳಕೆ ದಿನೇ ದಿನೇ ಕಳಪೆಯಾಗುತ್ತಿದೆ. ಭಾಷಾ ಜ್ಞಾನದ ಕೊರತೆ ಇಂದು ಎದ್ದು ಕಾಣುತ್ತಿದೆ. ಭಾಷೆಯ ಬಗ್ಗೆ ಅರಿವೇ ಇಲ್ಲದವರು ಇಂದು ಮಾಧ್ಯಮಗಳಲ್ಲಿ ನಿರೂಪಕರಾಗಿ, ವಾರ್ತಾವಾಚಕರಾಗಿ, ಸುದ್ದಿ ಬರಹಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಭಾಷಾ ಬಳಕೆ, ಅವರ ಉಚ್ಛಾರಣಾ ದೋಷ ಎಲ್ಲವೂ ಸಹಜವಾಗಿಯೇ, ಜನಸಾಮಾನ್ಯನಿಗೂ ಕಾಣುವಂತೆಯೇ ಇದೆ. ವಾಹಿನಿಗಳೂ ಸಹ ಭಾಷಾ ಬಳಕೆಯ ಬಗ್ಗೆ ಹೆಚ್ಚೇನು ಗಮನಹರಿಸದೇ ಇರುವುದನ್ನು ಕಾಣಬಹುದು. ಮಾಧ್ಯಮ ಅತ್ಯಂತ ವೇಗವಾಗಿ ಜನರನ್ನು ತಲುಪುತ್ತದೆ. ಮಾಧ್ಯಮಗಳು ಇಂದು ಬಳಸುತ್ತಿರು ಭಾಷೆಯಲ್ಲಿ ಸುಧಾರಣೆಯಾಗದಿದ್ದರೆ ಅವರು ಇಂದು ತೋರುತ್ತಿರುವ ಭಾಷೆಯೇ ನಿಜವಾದ ಕನ್ನಡ ಎಂದು ಯುವಜನರು ನಂಬುವ ಸಾಧ್ಯತೆಗಳು ಹೆಚ್ಚಾಗಿವೆ. ಹಾಗಾಗಿ ಮಾಧ್ಯಮಗಳು ಭಾಷಾ ಬಳಕೆಯ ಬಗ್ಗೆ ಹೆಚ್ಚಿನ ಗಮನಕೊಡಬೇಕಾಗಿದೆ. ಹೆಚ್ಚು ಹೆಚ್ಚು ಆಂಗ್ಲಭಾಷಾ ಪದಗಳನ್ನು ಬಳಸುವುದು, ಭಾಷಾ ಬಳಕೆಯಲ್ಲಿನ ದೋಷಗಳು ಎಲ್ಲವನ್ನೂ ಸರಿಪಡಿಸಿಕೊಳ್ಳುವ ಅಗತ್ಯವಿದೆ.

Article Details

Section

Research Articles

Author Biography

ಮೀನಾಕುಮಾರಿ ಎಂ.

ಸಹಾಯಕ ಪ್ರಾಧ್ಯಾಪಕಿ, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೆ.ಆರ್. ಪುರಂ, ಬೆಂಗಳೂರು.

How to Cite

ಮೀನಾಕುಮಾರಿ ಎಂ. (2023). ಟಿ.ವಿ. ಮಾಧ್ಯಮದಲ್ಲಿ ಕನ್ನಡ ಭಾಷೆಯ ಅಸ್ತಿತ್ವ. ಅಕ್ಷರಸೂರ್ಯ (AKSHARASURYA), 2(10), 65 to 73. https://aksharasurya.com/index.php/latest/article/view/237

References

ಆಧುನಿಕ ಕನ್ನಡ ಮಾಧ್ಯಮಗಳು ಮತ್ತು ಕನ್ನಡದ ಅಭಿವೃದ್ಧಿ (2003), ಟಿ. ಸಿ. ಪೂರ್ಣಿಮ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಬ್ರೇಕಿಂಗ್ ನ್ಯೂಸ್ ಮರ್ಮ, ಟಿ.ಆರ್.ಪಿ. ಮಂತ್ರ ಹಾಗೂ ಸುದ್ದಿಮನೆ ಸ್ವಾರಸ್ಯಗಳು (2019), ಎಂ. ವೋಮಕೇಶ.

ಸಮೂಹ ಮಾಧ್ಯಮ ಮತ್ತು ಕನ್ನಡ ಭಾಷೆ (ನವಂಬರ್ 23, 2019) (ಅಂತರ್ಜಾಲ ಲೇಖನ), ಪುರುಷೋತ್ತಮ ಬಿಳಿಮಲೆ.

ಮಾಧ್ಯಮಗಳು ಮತ್ತು ಭಾಷೆ (ಸೆಪ್ಟೆಂಬರ್ 22, 2011) (ಅಂತರ್ಜಾಲ ಲೇಖನ), ಜಗದೀಶ್ ಕೊಪ್ಪ.

ಡಿಜಿಟಲ್ ಯುಗದಲ್ಲಿ ಕನ್ನಡದ ಅಸ್ಮಿತೆ (ಡಿಸೆಂಬರ್ 15, 2019), ವಿಜಯಕರ್ನಾಟಕ, ಎನ್. ರವಿಶಂಕರ್.

ಇಂದಿನ ಮಾಧ್ಯಮಗಳಲ್ಲಿ ಕನ್ನಡದ ಸ್ಥಿತಿ ಗತಿ: ನಮ್ಮ ಮುಂದಿರುವ ಸವಾಲುಗಳು (ಫೆಬ್ರವರಿ 16, 2011) (ಅಂತರ್ಜಾಲ ಲೇಖನ), ಬಿ. ಸುರೇಶ್.

Most read articles by the same author(s)