ತಲ್ಲೂರ ರಾಯನಗೌಡರು

Main Article Content

ಯಲ್ಲಪ್ಪ ಬಸಪ್ಪ ಕಡಕೋಳ
ಮಹೇಶ ಗಾಜಪ್ಪನವರ

Abstract

ಬೆಳಗಾವಿ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅನೇಕ ಮಹನೀಯರು ತಮ್ಮನ್ನು ತೊಡಗಿಸಿಕೊಂಡು ತಮ್ಮದೇ ಆದ ವೈಶಿಷ್ಟ್ಯತೆಯ ಬದುಕಿನೊಂದಿಗೆ ಹೋರಾಡುವ ಮೂಲಕ ಹೆಸರುವಾಸಿಯಾಗಿರುವರು. ಅಂಥವರ ಬದುಕು ಬರಹಗಳು ಇಂದಿನ ಪೀಳಿಗೆಗೆ ದೊರೆಯಬೇಕು. ಬೆಳಗಾವಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರಲ್ಲಿ ತಲ್ಲೂರ ರಾಯನಗೌಡರ ಹೆಸರು ಕೂಡ ಪ್ರಮುಖವಾಗಿದೆ. ಅವರು ಗಾಂಧೀಜಿಯವರ ಭಾಷಣದಿಂದ ಪ್ರಭಾವಿತರಾಗಿ ತಮ್ಮ ಎಲ್.ಎಲ್.ಬಿ. ಶಿಕ್ಷಣವನ್ನು ಮೊಟಕುಗೊಳಿಸಿ ಸ್ವಂತ ಊರಾದ ತಲ್ಲೂರಲ್ಲಿ ನೆಲೆಸಿ ಹತ್ತಿರದ ಮುರಗೋಡ ಗುಡ್ಡದಲ್ಲಿ ಭೂಗತರಾಗಿದ್ದುಕೊಂಡು ತಮ್ಮ ಸಹಚರರೊಂದಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಳ್ಳುವ ಮೂಲಕ ಜೈಲುವಾಸ ಅನುಭವಿಸಿದವರು. ಸ್ವಾತಂತ್ರ್ಯ ನಂತರ ಕರ್ನಾಟಕ ಏಕೀಕರಣ ಮತ್ತು ಕಿತ್ತೂರು ಕುರಿತು ಸಂಶೋಧನೆಯಲ್ಲಿ ತೊಡಗಿಕೊಂಡು ತಮ್ಮದೇ ಆದ ಬರವಣಿಗೆ, ರಾಜಕೀಯ ಮತ್ತು ಸಾಮಾಜಿಕ ಬದುಕನ್ನು ಬದುಕಿ ಬಾಳಿದರು. ಅವರ ಕುರಿತು ಇದುವರೆಗೂ ಯಾವುದೇ ವಿಶ್ವವಿದ್ಯಾಲಯದಲ್ಲಿ ಸಂಶೋಧನೆಗಳು ಜರುಗಿರುವುದಿಲ್ಲ. ತಲ್ಲೂರ ಗ್ರಾಮದಲ್ಲಿ ರಾಯನಗೌಡರ ಕುಟುಂಬದವರು ಮತ್ತು ಅವರನ್ನು ಹತ್ತಿರದಿಂದ ಕಂಡವರನ್ನು ಈ ಕುರಿತು ವಿಚಾರಿಸಿದಾಗ ಮಹತ್ವದ ಸಂಗತಿಗಳು ದೊರಕಿದವು. ಈ ಕುರಿತು ಅವರ ವ್ಯಕ್ತಿತ್ವದ ಮೇಲೆ ಈ ಬರಹ ಬೆಳಕು ಚಲ್ಲುತ್ತದೆ.

Article Details

Section

Research Articles

Author Biographies

ಯಲ್ಲಪ್ಪ ಬಸಪ್ಪ ಕಡಕೋಳ

ಸಂಶೋಧನಾ ವಿದ್ಯಾರ್ಥಿ, ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ.

ಮಹೇಶ ಗಾಜಪ್ಪನವರ

ಸಹಾಯಕ ಪ್ರಾಧ್ಯಾಪಕರು, ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಬೆಳಗಾವಿ.

References

ಕರ್ನಾಟಕ ಏಕೀಕರಣ ಇತಿಹಾಸ (೨೦೨೦), ಡಾ. ಎಚ್. ಎಸ್. ಗೋಪಾಲರಾವ್, ನವ ಕರ್ನಾಟಕ ಪ್ರಕಾಶನ, ಬೆಂಗಳೂರು.

ಸಂಶೋಧಕ ಸಾಹಿತಿ ತಲ್ಲೂರು ರಾಯನಗೌಡರು (೨೦೧೦), ಸಂ. ಡಾ. ಬಸನಗೌಡ ಆ‌ರ್. ಪಾಟೀಲ, ತಲ್ಲೂರ ರಾಯನಗೌಡ ಸ್ಮಾರಕ ವಿಶ್ವಸ್ಥ ಸಂಸ್ಥೆ ಬೆಂಗಳೂರು.

ಕಿತ್ತೂರು ಸಂಸ್ಥಾನ ಸಾಹಿತ್ಯ (೨೦೧೫), ಡಾ .ಎಂ. ಎಂ. ಕಲಬುರ್ಗಿ. ಲಿಂಗಾಯತ ಅಧ್ಯಯನ ಸಂಸ್ಥೆ, ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠ, ಎಡೆಯೂರು, ಡಂಬಳ, ಗದಗ.

ತಲ್ಲೂರ ರಾಯನಗೌಡರು (೧೯೯೧), ಆರ್. ಎಫ್. ತಳವಾರ, ವೀರಶೈವ ಅಧ್ಯಯನ ಸಂಸ್ಥೆ, ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಎಡೆಯೂರು, ಡಂಬಳ, ಗದಗ.

ಭಾರತ ಸ್ವಾತಂತ್ರ್ಯ ಮತ್ತು ಕರ್ನಾಟಕ ಏಕೀಕರಣ ಲಿಂಗಾಯಿತರ ಪಾತ್ರ (೧೯೯೮), ಸಂ. ಡಾ. ಎಂ. ಎಂ. ಕಲಬುರ್ಗಿ ಮತ್ತು ಎಚ್.ಎಸ್.ಪಾಟೀಲ, ವೀರಶೈವ ಅಧ್ಯಯನ ಸಂಸ್ಥೆ, ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಎಡೆಯೂರು, ಡಂಬಳ, ಗದಗ.

ಸಂಶೋಧನೆಯ ಸ್ವರೂಪ (೨೦೧೮), ಡಾ.ಬಿ ವಿ.ಶಿರೂರ, ಅನ್ನಪೂರ್ಣ ಪ್ರಕಾಶನ, ಹುಬ್ಬಳ್ಳಿ.