ಡಾ. ರಂಗರಾಜ ವನದುರ್ಗ ಅವರ “ಬಂಡೆದ್ದವರು” ನಾಟಕದಲ್ಲಿ ಬದುಕಿನ ನೆಲೆ
Main Article Content
Abstract
ಡಾ. ರಂಗರಾಜ ವನದುರ್ಗ ಅವರ 'ಬಂಡೆದ್ದವರು' ನಾಟಕವು ಕಲ್ಲೂರು ಗ್ರಾಮದ ಹಿನ್ನೆಲೆಯಲ್ಲಿ ಜಮೀನ್ದಾರಿ ವ್ಯವಸ್ಥೆಯ ಶೋಷಣೆಯ ವಿರುದ್ಧ ನಡೆಯುವ ಹೋರಾಟವನ್ನು ಚಿತ್ರಿಸುತ್ತದೆ. ಗೌಡ ಮತ್ತು ದೇಸಾಯಿಯವರಂತಹ ಪ್ರಭಾವಿಗಳು ಮುಗ್ಧ ಜನರನ್ನು, ವಿಶೇಷವಾಗಿ ಶ್ರಮಿಕ ಸಮುದಾಯವನ್ನು ಶೋಷಿಸುವ ಪರಿಯನ್ನು ನಾಟಕ ಮಾರ್ಮಿಕವಾಗಿ ತೆರೆದಿಡುತ್ತದೆ. ಚುನಾವಣೆಯ ಸಂದರ್ಭದಲ್ಲಿ ಸುಳ್ಳು ಆಶ್ವಾಸನೆಗಳನ್ನು ನೀಡಿ ಜನರನ್ನು ವಂಚಿಸುವ ಹುನ್ನಾರಗಳು ಹಾಗೂ ಅದರ ಪರಿಣಾಮವಾಗಿ ನಡೆಯುವ ಸಾವು-ನೋವುಗಳು ಇಲ್ಲಿ ಚಿತ್ರಿತವಾಗಿವೆ. ಅಂತಿಮವಾಗಿ ಶಿಕ್ಷಣ ಪಡೆದ ಯುವಕ ಭೈರನ ನೇತೃತ್ವದಲ್ಲಿ ದಲಿತರು ಮತ್ತು ಶೋಷಿತರು ವ್ಯವಸ್ಥೆಯ ವಿರುದ್ಧ ಸಿಡಿದೆದ್ದು ಸಾಮಾಜಿಕ ನ್ಯಾಯಕ್ಕಾಗಿ ಬಂಡೇಳುವ ಪ್ರಕ್ರಿಯೆಯು ನಾಟಕದ ಪ್ರಮುಖ ಆಶಯವಾಗಿದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
References
ರಂಗರಾಜ ವನದುರ್ಗ, ಬಂಡೆದ್ದವರು (ನಾಟಕ).
ರಂಗರಾಜ ವನದುರ್ಗ, ಸಾಂಸ್ಕೃತಿಕ ಮುಖಾಮುಖಿ.
ಸಿ. ಎನ್. ರಾಮಚಂದ್ರನ್, ಸಮಕಾಲೀನ ತಲ್ಲಣಗಳು ಚರಿತ್ರೆ, ಸಾಹಿತ್ಯ.
ಡಿ. ಆರ್. ನಾಗರಾಜ್, ಸಂಸ್ಕೃತಿ ಕಥನ.