ಪೂರ್ವಾಂಗನೆ-ಪಶ್ಚಿಮಾಂಗನೆಗೆ: ಕವಿತೆಯ ಒಳನೋಟಗಳು
Main Article Content
Abstract
ಕಾವ್ಯಾನಂದ (ಸಿದ್ದಯ್ಯ ಪುರಾಣಿಕ) ಅವರ 'ನಾ ಕರಿಯಳೆಂದು ನೀ ಜರೆಯಬೇಡ ಬಿಳಿಗೆಳತಿ' ಕವನವು ಪ್ರಕೃತಿ ಸಹಜ ಚಹರೆಗಳನ್ನು ಪ್ರಶ್ನಿಸಿ ವರ್ಣಭೇದ ನೀತಿಯನ್ನು ಕಟುವಾಗಿ ಖಂಡಿಸುತ್ತದೆ. ಕಪ್ಪು ಬಣ್ಣವು ಕೇವಲ ಬಣ್ಣವಲ್ಲ, ಅದು ಜೀವಕಳೆ, ಫಲವಂತಿಕೆ, ಸಮೃದ್ಧಿ ಮತ್ತು ದುಡಿಯುವ ಕೈಗಳ ಸಂಕೇತವಾಗಿದೆ ಎಂಬುದನ್ನು ಕವಿತೆ ಮನವರಿಕೆ ಮಾಡಿಕೊಡುತ್ತದೆ. ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿ ಹಾಗೂ ಭಾರತದ ಜಾತಿ ಪದ್ಧತಿಯಂತಹ ಸಾಮಾಜಿಕ ಅಸಮಾನತೆಗಳ ವಿರುದ್ಧ ದಮನಿತರ ಪರವಾದ ನಿಲುವನ್ನು ಇದು ಪ್ರತಿಪಾದಿಸುತ್ತದೆ. ಬಾಹ್ಯ ಸೌಂದರ್ಯಕ್ಕಿಂತ ಕಾರ್ಯನಿಷ್ಠೆ ಮತ್ತು ಸೌಹಾರ್ದತೆಯೇ ಮುಖ್ಯವೆಂದು ತಿಳಿಸುತ್ತಾ, ಮನುಷ್ಯರ ನಡುವಿನ ಸಾಮರಸ್ಯದ ಬದುಕಿನ ಆಶಯವನ್ನು ಕವಿ ಇಲ್ಲಿ ಸ್ವಾರಸ್ಯವಾಗಿ ವಿವರಿಸಿದ್ದಾರೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
References
ಕರುಣಾ ಶ್ರಾವಣ (ಕವನ ಸಂಕಲನ (1955).), ಸಿದ್ಧಯ್ಯ ಪುರಾಣಿಕರು.
ಸಿದ್ದಯ್ಯ ಪುರಾಣಿಕರ ಸಮಗ್ರ ಸಾಹಿತ್ಯ.
ಸಿದ್ದಯ್ಯ ಪುರಾಣಿಕ ಜೀವನ ಚರಿತ್ರೆ, ಪ್ರಭುಸ್ವಾಮಿ ಕಟ್ಟಾವಾಡಿ.
ಸಿದ್ದಯ್ಯ ಪುರಾಣಿಕ ಜೀವನ ಚರಿತ್ರೆ, ನಾಗಾಬಾಯಿ ಬುಳ್ಳ.
ಸಿದ್ದಯ್ಯ ಪುರಾಣಿಕರು ಸಾಹಿತ್ಯ, ಸಂಗ್ರಹ: ಉದಯ್ ಪುರಾಣಿಕ.