ಆಧುನಿಕತೆಯ ಅವಾಂತರಗಳಿಗೆ ಪರಿಹಾರ: ಕಂಬಾರರ 'ಬೋಳೇಶಂಕರ'
Main Article Content
Abstract
ಚಂದ್ರಶೇಖರ ಕಂಬಾರರ 'ಬೆಪ್ತಕ್ಕಡಿ ಬೋಳೇಶಂಕರ' ನಾಟಕವು ಗ್ರಾಮೀಣ ಸಂಸ್ಕೃತಿ ಮತ್ತು ಶ್ರಮಜೀವನದ ಮಹತ್ವವನ್ನು ಸಾರುತ್ತದೆ. ನಗರೀಕರಣ, ದುರಾಸೆ ಹಾಗೂ ಭೋಗದ ಬದುಕಿಗೆ ಮಾರುಹೋಗುತ್ತಿರುವ ಇಂದಿನ ದಿನಗಳಲ್ಲಿ, ಬೋಳೇಶಂಕರನ ಸರಳ ಬದುಕು ಮತ್ತು ಅಧಿಕಾರ ವಿಮುಖತೆ ಆದರ್ಶಪ್ರಾಯವಾಗಿದೆ. 'ಹಸಿರೇ ಉಸಿರು' ಎಂಬುದನ್ನು ನಂಬಿರುವ ನಾಯಕನು ದುಡಿದು ತಿನ್ನುವ ಸಿದ್ಧಾಂತವನ್ನು ಪ್ರತಿಪಾದಿಸುತ್ತಾನೆ. ಸೈತಾನನ ಪ್ರತಿನಿಧಿಗಳಾದ ಪಿಶಾಚಿಗಳು ನಾಣ್ಯ ಮತ್ತು ಸೈನ್ಯದ ಆಮಿಷವೊಡ್ಡಿದರೂ, ತನ್ನ ಕಾಯಕ ನಿಷ್ಠೆಯಿಂದ ಬೋಳೇಶಂಕರನು ಅವರನ್ನು ಮಣಿಸುತ್ತಾನೆ. ಆಧುನಿಕ ಯಂತ್ರ ನಾಗರಿಕತೆಯ ಕೊಳಕುಗಳಿಗೆ ಬಸವಾದಿ ಶರಣರ ಕಾಯಕಪ್ರಜ್ಞೆ ಮತ್ತು ಸಮಾನತೆಯ ಸಮಾಜವಾದಿ ಚಿಂತನೆಗಳೇ ನೈಜ ಪರಿಹಾರ ಎಂಬುದನ್ನು ಈ ನಾಟಕವು ಎತ್ತಿಹಿಡಿಯುತ್ತದೆ.
Article Details
Section

This work is licensed under a Creative Commons Attribution-NonCommercial-ShareAlike 4.0 International License.
References
ಚಂದ್ರಶೇಖರ ಕಂಬಾರ, ಬೆಪ್ತಕ್ಕಡಿ ಬೋಳೇಶಂಕರ (ನಾಟಕ), ಅಂಕಿತ ಪ್ರಕಾಶನ, ಬೆಂಗಳೂರು.
ಬಸವರಾಜ ಮಲಶೆಟ್ಟಿ, ಚಂದ್ರಶೇಖರ ಕಂಬಾರ, ನವಕರ್ನಾಟಕ ಪ್ರಕಾಶನ, 1996.
ನಾಗವೇಣಿ ಎಚ್, ರಂಗಸಂಪನ್ನರು: ಡಾ. ಚಂದ್ರಶೇಖರ ಕಂಬಾರ, ಕರ್ನಾಟಕ ನಾಟಕ ಅಕಾಡೆಮಿ, ಬೆಂಗಳೂರು, 2004.