ಆದಿಲ್ಶಾಹಿ ಶಾಸನಗಳಲ್ಲಿ ಧಾರ್ಮಿಕ ಸಮನ್ವತೆ (ಪರ್ಶಿಯನ್, ಅರೇಬಿಕ್ ಮತ್ತು ಉರ್ದು ಶಾಸನಗಳು)
Main Article Content
Abstract
ಪ್ರಾಚೀನ ಕಾಲದಿಂದಲೂ ಕರ್ನಾಟಕವು ಹಲವಾರು ಧರ್ಮಗಳನ್ನು ಮತ್ತು ಅವುಗಳ ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಪೋಷಿಸುತ್ತಾ ಬಂದಿದೆ. ಕ್ರಿ.ಶ. 1489 ರಿಂದ 1686 ರವರೆಗೆ ವಿಜಯಪುರವನ್ನು ಆಳಿದ ಆದಿಲ್ಶಾಹಿ ಅರಸರು ಹಿಂದೂ-ಮುಸ್ಲಿಂ ಭಾವೈಕ್ಯತೆ ಮತ್ತು ಧಾರ್ಮಿಕ ಸಮನ್ವಯತೆಗೆ ಹೆಸರಾಗಿದ್ದರು. ಇವರ ಕಾಲದ ಪರ್ಶಿಯನ್, ಅರೇಬಿಕ್ ಮತ್ತು ಉರ್ದು ಶಾಸನಗಳು ಇದಕ್ಕೆ ಮೂಕ ಸಾಕ್ಷಿಯಾಗಿವೆ. ತಮ್ಮ ಆಡಳಿತದಲ್ಲಿ ಹಿಂದೂ ಮತ್ತು ಮುಸ್ಲಿಂ ಸೇವಕರಿಗೆ ಯಾವುದೇ ಭೇದಭಾವವಿಲ್ಲದೆ ಸಮಾನ ಅವಕಾಶಗಳನ್ನು ನೀಡಿದ್ದರು. ಜಗದಿರಾವ್, ಪಂಡಿತ್ ನಂದಜಿ, ಗೋವಿಂದರಾವ್ ಮುಂತಾದ ಹಿಂದೂ ಸಾಮಂತರ ಹೆಸರುಗಳು ಕಟ್ಟಡ ನಿರ್ಮಾಣದ ಶಾಸನಗಳಲ್ಲಿ ಉಲ್ಲೇಖಗೊಂಡಿರುವುದು ಹಾಗೂ ಸರ್ವಧರ್ಮದವರಿಗೂ ಅನ್ವಯಿಸುವಂತೆ ಕರ ವಿನಾಯಿತಿ ಮತ್ತು ದಾನದತ್ತಿಗಳ ಶಾಸನಗಳನ್ನು ಹೊರಡಿಸಿರುವುದು ಇವರ ಆದರ್ಶ ಆಡಳಿತವನ್ನು ಪ್ರತಿಬಿಂಬಿಸುತ್ತದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಕರ್ನಾಟಕದ ಪರ್ಶಿಯನ್, ಅರೇಬಿಕ್ ಮತ್ತು ಉರ್ದು ಶಾಸನಗಳು, ಎಂ. ಯಾಸೀನ್ ಖುದ್ದುಸಿ, ಸೀತಾರಾಮ್ ಜಾಗೀರ್ದಾರ್, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
ಆದಿಲ್ಷಾಹಿ ಸಂಪುಟ-18, ಪುಟ ಸಂಖ್ಯೆ-ix.
ಆದಿಲ್ಷಾಹಿ ಸಂಪುಟ-18, ಪುಟ ಸಂಖ್ಯೆ-xiii.
ಕರ್ನಾಟಕದ ಪರ್ಶಿಯನ್, ಅರೇಬಿಕ್ ಮತ್ತು ಉರ್ದು ಶಾಸನಗಳು, ಪುಟ ಸಂಖ್ಯೆ-76, ಎಂ. ಯಾಸೀನ್ ಖುದ್ದುಸಿ, ಸೀತಾರಾಮ್ ಜಾಗೀರ್ದಾರ್, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
ಕರ್ನಾಟಕದ ಪರ್ಶಿಯನ್, ಅರೇಬಿಕ್ ಮತ್ತು ಉರ್ದು ಶಾಸನಗಳು, ಪುಟ ಸಂಖ್ಯೆ-78, ಎಂ. ಯಾಸೀನ್ ಖುದ್ದುಸಿ, ಸೀತಾರಾಮ್ ಜಾಗೀರ್ದಾರ್, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
ಕರ್ನಾಟಕದ ಪರ್ಶಿಯನ್, ಅರೇಬಿಕ್ ಮತ್ತು ಉರ್ದು ಶಾಸನಗಳು, ಪುಟ ಸಂಖ್ಯೆ-85, ಎಂ. ಯಾಸೀನ್ ಖುದ್ದುಸಿ, ಸೀತಾರಾಮ್ ಜಾಗೀರ್ದಾರ್, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
ಕರ್ನಾಟಕದ ಪರ್ಶಿಯನ್, ಅರೇಬಿಕ್ ಮತ್ತು ಉರ್ದು ಶಾಸನಗಳು, ಪುಟ ಸಂಖ್ಯೆ-88, ಎಂ. ಯಾಸೀನ್ ಖುದ್ದುಸಿ, ಸೀತಾರಾಮ್ ಜಾಗೀರ್ದಾರ್, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
ಕರ್ನಾಟಕದ ಪರ್ಶಿಯನ್, ಅರೇಬಿಕ್ ಮತ್ತು ಉರ್ದು ಶಾಸನಗಳು, ಪುಟ ಸಂಖ್ಯೆ-109- 110, ಎಂ. ಯಾಸೀನ್ ಖುದ್ದುಸಿ, ಸೀತಾರಾಮ್ ಜಾಗೀರ್ದಾರ್, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
ಕರ್ನಾಟಕದ ಪರ್ಶಿಯನ್, ಅರೇಬಿಕ್ ಮತ್ತು ಉರ್ದು ಶಾಸನಗಳು, ಪುಟ ಸಂಖ್ಯೆ-129, ಎಂ. ಯಾಸೀನ್ ಖುದ್ದುಸಿ, ಸೀತಾರಾಮ್ ಜಾಗೀರ್ದಾರ್, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.
ಕರ್ನಾಟಕದ ಪರ್ಶಿಯನ್, ಅರೇಬಿಕ್ ಮತ್ತು ಉರ್ದು ಶಾಸನಗಳು, ಪುಟ ಸಂಖ್ಯೆ-266- 267, ಎಂ. ಯಾಸೀನ್ ಖುದ್ದುಸಿ, ಸೀತಾರಾಮ್ ಜಾಗೀರ್ದಾರ್, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.