ಸಿದ್ಧಲಿಂಗಯ್ಯನವರ ಕಾವ್ಯಗಳು: ದಲಿತ ಸಮುದಾಯದ ಆತ್ಮಕಥನ

Main Article Content

ಸಿದ್ರಾಮ ಯರನಾಳ

Abstract

ಆಧುನಿಕ ಕನ್ನಡ ಸಾಹಿತ್ಯದ ಪ್ರಕಾರಗಳಲ್ಲಿ ಆತ್ಮಕಥೆಯು ಒಂದು ವಿಶಿಷ್ಟ ಪ್ರಕಾರದ ಸಾಹಿತ್ಯವಾಗಿದೆ. ದಲಿತ ಆತ್ಮಕಥೆಗಳು ದಲಿತ ಜನಾಂಗದ ಕಥನಗಳೇ ಆಗಿರುತ್ತವೆ. ಒಂದು ಜನಾಂಗದ ಕವಿಯಾದ ಸಿದ್ದಲಿಂಗಯ್ಯನವರ ಕಾವ್ಯಗಳು ಓದುವುದುವೆಂದರೆ ಅದು ಒಂದು ಸಮುದಾಯದ ಆತ್ಮಕಥನವನ್ನು ಓದುವುದೇ ಆಗಿದೆ. ಶತಮಾನಗಳಿಂದ ಮೇಲು ವರ್ಗದವರ ಅವಕೃಪೆಗೆ ಒಳಗಾಗಿ ಅನುಭವಿಸಿದ ಅವಮಾನ, ನೋವು, ರಾಜಕೀಯ ಸ್ವಾತಂತ್ರ್ಯದಿಂದ ವಂಚಿತರಾಗಿ ಪ್ರಾಣಿಗಳಗಿಂತಲೂ ಹೀನ ಬದುಕನ್ನು ಸಾಗಿಸಿದ ಅಸ್ಪೃಶ್ಯ ಸಮುದಾಯದ ಆಕ್ರಂದನಗಳನ್ನು ಸಿದ್ದಲಿಂಗಯ್ಯನವರು ತಮ್ಮ ಕಾವ್ಯದ ವಸ್ತುವನ್ನಾಗಿರಿಸಿದ್ದಾರೆ. ದಲಿತ ಆತ್ಮಕಥೆಯ ಸ್ವರೂಪದ ನೆಲೆಗಳಾದ ಬಡತನ, ಅಸ್ಪೃಶ್ಯತೆ, ಶೋಷಣೆ, ಸಾಮಜಿಕ ಬದಲಾವಣೆಯ ಹಂಬಲಗಳು ಸಿದ್ದಲಿಂಗಯ್ಯನವರ ಕಾವ್ಯಗಳಲ್ಲಿ ಅಡಕವಾಗಿವೆ.

Article Details

Section

Research Articles

Author Biography

ಸಿದ್ರಾಮ ಯರನಾಳ

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರ್ಕಾರಿ ಪ್ರಥಮದರ್ಜೆ ಕಾಲೇಜು, ಕೊಕಟನೂರ, ತಾ. ಅಥಣಿ.

References

ಡಾ. ಸಿದ್ದಲಿಂಗಯ್ಯ-ಮೆರವಣಿಗೆ:ಅಂಕಿತಾ ಪ್ರಕಾಶನ ಪ್ರಕಟಣೆ-2012.

ಡಾ. ಹೊಂಬಯ್ಯ-ಕನ್ನಡದಲಿತ ಆತ್ಮಕಥೆಗಳು(ಸಂಶೋಧನೆಗ್ರಂಥ) ಡಾ. ಹೊಂಬಯ್ಯ.

ಅಪ್ಪರಾಯ ಮದರಿ-ಗೊಂದಲಿಗ್ಯಾ-ಲೋಹಿಯಾ ಪ್ರಕಾಶನ ಬಳ್ಳಾರಿ ಪ್ರಕಟಣೆ-2012.

ಡಾ. ಸಿದ್ದಲಿಂಗಯ್ಯ-ಊರುಕೇರಿ:ಭಾಗ-1 & ಭಾಗ-2ಅಂಕಿತಾ ಪ್ರಕಾಶನ ಪ್ರಕಟಣೆ-2012.

ಡಾ: ಸಿದ್ದಲಿಂಗಯ್ಯ-ನನ್ನ ಜನಗಳು-ಕನ್ನಡ ಮತ್ತು ಸಂಸ್ಕೃತ ಇಲಾಖೆ ಬೆಂಗಳೂರು ಪ್ರಕಟಣೆ-2010.

ಬಾಮಾ-ತಾಳೆಗರಿ-ತಮಿಳುಕ್ರೈಸ್ತದಲಿತ ಆತ್ಮಕಥನ: ಕನ್ನಡಕ್ಕೆಡಾ. ಎಚ್.ಎಸ್.ಅನುಪಮಾ.ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಣೆ-2016.

ಕುಪ್ಪೆ ನಾಗರಾಜ-ಅಲೆಮಾರಿಯ ಅಂತರಂಗ-ನವಕರ್ನಾಟಕ ಪ್ರಕಾಶನ-ಪ್ರಕಟಣೆ ವರ್ಷ-2013.