ಡಾ. ಚಂದ್ರಶೇಖರ ಕಂಬಾರರ 'ಶಿವರಾತ್ರಿ' ನಾಟಕದಲ್ಲಿ ಸ್ತ್ರೀ ಸಂವೇದನೆ
Main Article Content
Abstract
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ಚಂದ್ರಶೇಖರ ಕಂಬಾರ ಅವರು ಬರೆದಿರುವ 'ಶಿವರಾತ್ರಿ' ನಾಟಕವು ಹನ್ನೆರಡನೆಯ ಶತಮಾನದ ಬಸವಣ್ಣನವರ ಸಾಮಾಜಿಕ ಕ್ರಾಂತಿಯ ಪರಿಣಾಮವನ್ನು ಅನಾವರಣಗೊಳಿಸುತ್ತದೆ. ಬಸವಣ್ಣನವರು ಸ್ಥಾಪಿಸಹೊರಟ ಸಮಾನತೆ ತತ್ವವು ಪುರೋಹಿತಶಾಹಿ ಹಿತಾಸಕ್ತಿಗಳ ಕಪಿಮುಷ್ಟಿಯಲ್ಲಿ ಛಿದ್ರವಾಯಿತು ಎಂಬುದನ್ನು ಇದು ಧ್ವನಿಸುತ್ತದೆ. ಹನ್ನೆರಡನೇ ಶತಮಾನದಲ್ಲಿ ಮಹಿಳೆಯನ್ನು ನಿಕೃಷ್ಟವಾಗಿ ಕಾಣಲಾಗುತ್ತಿತ್ತು. 'ಶಿವರಾತ್ರಿ' ನಾಟಕದಲ್ಲಿ ಪುರೋಹಿತಶಾಹಿ ಮನಸ್ಸುಗಳ ಸಣ್ಣತನ ಹಾಗೂ ಅಧಿಕಾರಸ್ಥ ಮನಸ್ಸುಗಳ ನ್ಯೂನತೆಯನ್ನು ತಿಳಿಸುತ್ತ; ಮಹಿಳೆಯ ಆದರ್ಶ ವ್ಯಕ್ತಿತ್ವವನ್ನು ಎತ್ತಿ ಹಿಡಿಯಲಾಗಿದೆ. ವೇಶ್ಯಯರ ಶ್ರೇಷ್ಠತ್ವವನ್ನು ಎತ್ತಿ ಹಿಡಿಯುವ ಮೂಲಕ ಅವರಿಗೂ ಒಂದು ಆದರ್ಶ ಬದುಕಿನ ನೆಲೆ ಇರುತ್ತದೆ ಎಂಬ ವಾಸ್ತವವನ್ನು ಕಂಬಾರರು ಈ ನಾಟಕದಲ್ಲಿ ತಿಳಿಸಿದ್ದಾರೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಚಂದ್ರಶೇಖರ ಕಂಬಾರ (೨೦೧೮), ಶಿವರಾತ್ರಿ, ಅಂಕಿತ ಪುಸ್ತಕ, ಬೆಂಗಳೂರು.
ಜಿ. ಎಸ್. ಭಟ್ಟ (ಸಂ) (೨೦೧೮), ಕಂಬಾರ ಸಾಹಿತ್ಯ ಬಿಂಬ, ತನುಮನು ಪ್ರಕಾಶನ, ಮೈಸೂರು.
ಬಸವರಾಜ ಕಲ್ಗುಡಿ (ಸಂ) (೨೦೧೨), ಕಂಬಾರರ ಸಾಹಿತ್ಯದ ನೆಲೆ-ಬೆಲೆ, ಅಂಕಿತ ಪುಸ್ತಕ, ಬೆಂಗಳೂರು.