ದೋಪ್ದಿ ಪಾತ್ರದ ಮರು ಸೃಷ್ಟಿ

Main Article Content

ಅಮರಾವತಿ ವಿ.

Abstract

ಮಹಾಶ್ವೇತಾ ದೇವಿಯವರ 'ದೋಪ್ದಿ' ಕಥೆಯನ್ನು ಆಧರಿಸಿ ಡಾ. ಎಚ್. ಎಲ್. ಪುಷ್ಪಾ ಅವರು ರಚಿಸಿದ ಕವಿತೆಯ ಹಿನ್ನೆಲೆಯಲ್ಲಿ ಹೆಣ್ಣಿನ ಶೋಷಣೆ ಮತ್ತು ಪ್ರತಿಭಟನೆಯನ್ನು ವಿಮರ್ಶಿಸಲಾಗಿದೆ. ಪುರಾಣದ ದ್ರೌಪದಿಯನ್ನು ವರ್ತಮಾನದ ಬುಡಕಟ್ಟು ಮಹಿಳೆ ದೋಷ್ಠಿಯ (ದ್ರೌಪದಿ) ರೂಪದಲ್ಲಿ ಚಿತ್ರಿಸುವ ಮೂಲಕ, ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣಿನ ದೇಹದ ಮೇಲಾಗುವ ದೌರ್ಜನ್ಯಗಳನ್ನು ಎತ್ತಿತೋರಿಸಲಾಗಿದೆ. ಸೈನ್ಯದವರಿಂದ ಸಾಮೂಹಿಕ ಅತ್ಯಾಚಾರಕ್ಕೊಳಗಾದರೂ ದೋಷ್ಠಿಯು ಕುಗ್ಗದೆ, ತನ್ನ ಬೆತ್ತಲೆ ದೇಹವನ್ನೇ ಆಯುಧವನ್ನಾಗಿಸಿಕೊಂಡು ಅಧಿಕಾರಶಾಹಿಯ ವಿರುದ್ಧ ಪ್ರಬಲವಾಗಿ ಪ್ರತಿಭಟಿಸುತ್ತಾಳೆ. ಹೆಣ್ಣು ಕೇವಲ ಭೋಗದ ವಸ್ತುವಲ್ಲ; ಅವಳ ಆತ್ಮಸ್ಥೈರ್ಯವು ಸಾಂಪ್ರದಾಯಿಕ ಲೈಂಗಿಕ ನಿಯಮಗಳನ್ನು ಮೆಟ್ಟಿ ನಿಲ್ಲಬಲ್ಲದು ಎಂಬ ಆಶಯವನ್ನು ಕವಿತೆ ಮತ್ತು ಕಥೆಗಳೆರಡೂ ಅಭಿವ್ಯಕ್ತಿಸುತ್ತವೆ.

Article Details

Section

Research Articles

Author Biography

ಅಮರಾವತಿ ವಿ.

ಸಂಶೋಧನಾ ವಿದ್ಯಾರ್ಥಿ, ಕನ್ನಡ ಅಧ್ಯಯನ ಕೇಂದ್ರ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.

References

ಸ್ತನ ಕಥೆಗಳು (2010), ಮಹಾಶ್ವೇತಾದೇವಿ, ಗಾಯಿತ್ರಿ ಚಕ್ರವರ್ತಿ ಸ್ಟೀವಾಕ್ (ಅನುವಾದ), ಸಿಗಲ್ ಬುಕ್ಸ್, ಕಲ್ಕತ್ತಾ.

ಮದರಂಗಿ ವೃತ್ತಾಂತ (2020), ಡಾ. ಎಚ್. ಎಲ್. ಪುಷ್ಪ, ಕಿ. ರಂ. ಪ್ರಕಾಶನ, ಬೆಂಗಳೂರು.

ಮಹಿಳೆ ಚರಿತ್ರೆ ಮತ್ತು ಪುರಾಣ, ಡಾ. ರಾಮಲಿಂಗಪ್ಪ ಟಿ ಬೇಗೂರು, ಅಂಕಿತ ಪುಸ್ತಕ ಪ್ರಕಾಶನ, ಬೆಂಗಳೂರು.