ಜನಪದರ ಒಗಟುಗಳಲ್ಲಿ ಹಾಸ್ಯ

Main Article Content

ರವಿ ಎನ್.

Abstract

ಜನಪದ ಸಾಹಿತ್ಯದ ಪ್ರಮುಖ ಪ್ರಕಾರವಾದ ಒಗಟುಗಳು ಅಂತರಂಗದಲ್ಲಿ ಗೂಢಾರ್ಥವನ್ನು ಮತ್ತು ಬಹಿರಂಗದಲ್ಲಿ ಲೌಕಿಕ ಅರ್ಥವನ್ನು ಹೊಂದಿದ್ದು, ಮನುಷ್ಯನ ಬುದ್ಧಿಮತ್ತೆಯನ್ನು ಪರೀಕ್ಷಿಸುವ ಸಾಧನವಾಗಿವೆ. ದೈನಂದಿನ ಬದುಕಿನ ನೋವು-ನಲಿವು, ಆಸೆ-ಆಕಾಂಕ್ಷೆಗಳನ್ನು ಬಿಂಬಿಸುವ ಈ ಒಗಟುಗಳಲ್ಲಿ ಹಾಸ್ಯ ಮತ್ತು ವಿಡಂಬನೆಯ ಲೇಪನವು ಪ್ರಮುಖ ಆಕರ್ಷಣೆಯಾಗಿದೆ. ಹಳ್ಳಿಗರ ಕಠಿಣ ದುಡಿಮೆಯ ಆಯಾಸವನ್ನು ನಿವಾರಿಸಲು, ಮನರಂಜನೆಗಾಗಿ ಸೃಷ್ಟಿಯಾದ ಈ ಒಗಟುಗಳು ಕೆಲವೊಮ್ಮೆ ಲೈಂಗಿಕತೆಯ ಮುಸುಕನ್ನು ಹೊಂದಿದ್ದರೂ ಅವುಗಳಲ್ಲಿ ಅಶ್ಲೀಲತೆಗಿಂತ ಬದುಕಿನ ನೈಜ ಕ್ರಿಯೆಗಳೇ ಪ್ರಧಾನವಾಗಿವೆ. ಬಡತನ ಮತ್ತು ದುರಂತಗಳ ನಡುವೆಯೂ ಜನಪದರು ಸೃಷ್ಟಿಸಿದ ಈ ಮೋಜಿನ ಒಗಟುಗಳು, ಅವರ ಜೀವನ ಪ್ರೀತಿ, ವಿನೋದಪರತೆ ಮತ್ತು ಬೌದ್ಧಿಕ ಕಸರತ್ತನ್ನು ಅನಾವರಣಗೊಳಿಸುತ್ತವೆ.

Article Details

Section

Research Articles

Author Biography

ರವಿ ಎನ್.

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಸರ್ ಎಂ.ವಿ. ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜು, ನ್ಯೂ ಟೌನ್, ಭದ್ರಾವತಿ.

References

ಜನಪದ ಸಾಹಿತ್ಯ, ಡಾ. ಬಸವರಾಜ ನೆಲ್ಲಿಸರ (ಸಂ), ಪ್ರಸಾರಾಂಗ, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ.

ಜನಪದ ಸಾಹಿತ್ಯದಲ್ಲಿ ಹಾಸ್ಯ, ಮೃತ್ಯುಂಜಯ ಹೊರಕೇರಿ.

ಸ್ಥಳನಾಮ ವೀರರು, ಡಾ. ಕೂಡೂರು ವೆಂಕಟಪ್ಪ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, 2007.

ಜನಪದ ಸಾಹಿತ್ಯ ಸಂಚಯ, ಡಾ. ಗಾಯತ್ರೀ ನಾವಡ (ಸಂ), ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, 2021.