ಪುರಾಣಗಳಲ್ಲಿ ಮಾದಿಗ ಸಮುದಾಯದ ಚಿಂತನೆ

Main Article Content

ಮಾದೇಶ ಎನ್‌.

Abstract

ಒಂದು ಸಮುದಾಯದ ಚರಿತ್ರೆ ಮತ್ತು ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲು ಆ ಸಮುದಾಯದ ಸಂಕಥನಗಳು ಬಹುಮುಖ್ಯವಾಗಿವೆ. ಮಾದಿಗ ಸಮುದಾಯವು ಆದಿಜಾಂಬವನನ್ನು ತನ್ನ ಆದಿಪುರುಷನೆಂದು ಆರಾಧಿಸುತ್ತದೆ. ರಾಮಾಯಣ ಮತ್ತು ಮಹಾಭಾರತದಂತಹ ಶಿಷ್ಟಪುರಾಣಗಳಲ್ಲಿ ಆದಿಜಾಂಬವನ ಪಾತ್ರವನ್ನು ಕೇವಲ ಪ್ರಾಣಿರೂಪವಾಗಿ ಚಿತ್ರಿಸುವ ಮೂಲಕ ಆರ್ಯರು ತಮ್ಮ ವಿಕೃತತೆಯನ್ನು ಮೆರೆದಿದ್ದಾರೆ. ಆದರೆ ಮೂಲನಿವಾಸಿಗಳಾದ ಜಾಂಬವರು ಅಪಾರ ಸಿರಿಸಮೃದ್ಧಿಯ ಒಡೆಯರಾಗಿದ್ದರು ಮತ್ತು ಸಮುದ್ರ ಸೇತುವೆ ನಿರ್ಮಾಣ, ಯುದ್ಧ ಕಲೆ ಹಾಗೂ ವೈದ್ಯಕೀಯ ಜ್ಞಾನದಲ್ಲಿ ಪರಿಣತಿ ಹೊಂದಿದ್ದರು. ಆರ್ಯ ಮತ್ತು ದ್ರಾವಿಡರ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಈ ಪುರಾಣಗಳನ್ನು ಮರುವಿಶ್ಲೇಷಿಸುವ ಅಗತ್ಯವಿದೆ. ಮೌಖಿಕ ಪರಂಪರೆಯಲ್ಲಿ ಉಳಿದುಬಂದಿರುವ ಕುಲಪುರಾಣಗಳ ಮೂಲಕ ಶ್ರಮಿಕ ಸಂಸ್ಕೃತಿಯ ಸಾಮುದಾಯಿಕ ಅಸ್ಮಿತೆಯನ್ನು ಗುರುತಿಸುವುದು ಇಂದಿನ ತುರ್ತಾಗಿದೆ.

Article Details

Section

Research Articles

Author Biography

ಮಾದೇಶ ಎನ್‌.

ಭಾಷಾ ವಿಭಾಗದ ಮುಖ್ಯಸ್ಥರು, ಸೈಂಟ್ ಕ್ಲಾರೆಟ್ ಕಾಲೇಜು,  ಜಾಲಹಳ್ಳಿ, ಬೆಂಗಳೂರು.

References

ವಡ್ಡಗೆರೆ ನಾಗರಾಜಯ್ಯ, ಅಪ್ರಕಟಿತ ಪಿಎಚ್.ಡಿ., ಪ್ರಬಂಧ.

ಸಿಂದ್ ಮಾದಿಗರ ಸಂಸ್ಕೃತಿ, ಕೋಟಗಾನಹಳ್ಳಿ ರಾಮಯ್ಯ ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರ.

ಡಾ. ಅರವಿಂದ ಮಾಲಗತ್ತಿ, ಸೀಮಾತೀತ ಸಾಹಿತ್ಯ ಚರಿತ್ರೆ ಪ್ರಸಾರಾಂಗ. ಮೈಸೂರು ವಿ.ವಿ., ಮೈಸೂರು.

ಷ.ಶೆಟ್ಟ‌ರ್, ಹಳಗನ್ನಡ ಲಿಪಿ, ಲಿಪಿಕಾರ ಲಿಪಿವ್ಯವಸಾಯ.

ಡಾ. ಮಾದೇಶ್ ಎನ್. ಮಾದಿಗ ಸಮುದಾಯದ ಸಂಕಥನ, ಸಾಹಿತ್ಯ ಸಂಭ್ರಮ ಪ್ರಕಾಶನ, ಬೆಂಗಳೂರು.

ಗುರುಪ್ರಸಾದ್ ಕಂಟಲಗೆರೆ (ತುಮಕೂರು ಭಾಗದಲ್ಲಿ ದೊರೆತ ಕೈಫಿಯತ್ತು.) ಉಲ್ಲೇಖ ದಲಿತ ಸಾಂಸ್ಕೃತಿಕ ಕಥನಗಳ ಅಧ್ಯಯನ.

ಶಿವಾನಂದ ಕೆಳಗಿನಮನಿ, ಮಾದಿಗ ಲಿಂಗಾಯತರು.