ಆಧುನಿಕ ಮಹಿಳಾ ಸಾಹಿತ್ಯದ ಕಥಾ ಕಾದಂಬರಿಯ ತೆನೆ ಎಂ. ಕೆ. ಇಂದಿರಾ

Main Article Content

ಸೋಮಶೇಖರ್ ಎಲ್. ಆರ್.

Abstract

ಕನ್ನಡ ಸಾಹಿತ್ಯ ಲೋಕದಲ್ಲಿ ಎಂ. ಕೆ. ಇಂದಿರಾ ಅವರ ಸಾಧನೆ ಮತ್ತು ಮಹಿಳಾ ಪರ ಕಾಳಜಿಯನ್ನು ನಿರೂಪಿಸಲಾಗಿದೆ. ಪುರುಷ ಪ್ರಧಾನ ಸಮಾಜದಲ್ಲಿನ ಸ್ತ್ರೀಯರ ಸ್ಥಿತಿಗತಿ, ಬಾಲ್ಯ ವಿವಾಹ, ವಿಧವೆಯರ ನೋವು, ವೇಶ್ಯಾ ಪದ್ಧತಿ ಹಾಗೂ ಮೌಢ್ಯಗಳ ವಿರುದ್ಧ ಇವರ ಕಾದಂಬರಿಗಳು ಹೇಗೆ ಧ್ವನಿಯೆತ್ತಿವೆ ಎಂಬುದನ್ನು ವಿಶ್ಲೇಷಿಸಲಾಗಿದೆ. ತುಂಗಭದ್ರ, ಫಣಿಯಮ್ಮ, ಗೆಜ್ಜೆಪೂಜೆ ಮುಂತಾದ ಕೃತಿಗಳ ನೈಜ ಘಟನೆಗಳ ಹಿನ್ನೆಲೆ ಹಾಗೂ ಅವುಗಳಲ್ಲಿರುವ ಸ್ತ್ರೀವಾದಿ ನೆಲೆಗಟ್ಟನ್ನು ಕಟ್ಟಿಕೊಡಲಾಗಿದೆ. ಮಲೆನಾಡಿನ ಪರಿಸರ, ಭಾಷೆಯ ಸೊಗಡು ಮತ್ತು ನಿರಾಡಂಬರ ನಿರೂಪಣೆಯ ಮೂಲಕ ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸಿದ ಇಂದಿರಾ ಅವರ ಸಾಹಿತ್ಯಿಕ ಕೊಡುಗೆಯನ್ನು ಎತ್ತಿಹಿಡಿಯಲಾಗಿದೆ.

Article Details

Section

Research Articles

Author Biography

ಸೋಮಶೇಖರ್ ಎಲ್. ಆರ್.

ಸಹಾಯಕ ಪ್ರಾಧ್ಯಾಪಕ, ಕನ್ನಡ ವಿಭಾಗ, ಶ್ರೀ ಸಿದ್ಧಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು, ತುಮಕೂರು.

References

ಡಾ. ಎಸ್. ಎಸ್. ಭಗವತಿ ಮತ್ತು ಎಚ್. ಎಸ್. ಮೇಲಿನಮನಿ: ಹೊಸಗನ್ನಡ ಸಾಹಿತ್ಯಾಲೋಕನ

ಎಂ. ಕೆ. ಇಂದಿರಾರವರ ಕಾದಂಬರಿಗಳು

ಕೀರ್ತನಾಥ ಕುರ್ತುಕೋಟಿ: ನೂರು ಮರ ನೂರು ಸ್ವರ.

ಡಿ. ಎಲ್. ನರಸಿಂಹಚಾರ್ಯ: ಲೇಖನ ಮತ್ತು ಪೀಠಿಕೆಗಳು.

ಎಂ. ಕೆ. ಇಂದಿರಾರವರ ಸಂದರ್ಶನ. ದಿನಾಂಕ 25 ಮಾರ್ಚ್ 1989 ನಲ್ಲಿ ನೇಮಿಚಂದ್ರ ಹಾಗೂ ಶೇಷನಾರಾಯಣರವರು ನೆಡೆಸಿದ ಸಂದರ್ಶನ.