ಸಂಶೋಧನಾ ವಿಧಿ-ವಿಧಾನಗಳಲ್ಲಿನ ವಿದ್ಯಮಾನಗಳು ಹಾಗು ನೈತಿಕ ಕಾಳಜಿಗಳು

Main Article Content

ಸವಿತಾ ರವಿಶಂಕರ್

Abstract

ಸಂಶೋಧನೆಯು ಕೇವಲ ಪದವಿ ಗಳಿಕೆಯ ಔಪಚಾರಿಕ ಕ್ರಮವಾಗಬಾರದು; ಅದೊಂದು ಶೈಕ್ಷಣಿಕ ಮತ್ತು ಸಾಮಾಜಿಕ ಜವಾಬ್ದಾರಿಯಾಗಿದೆ. ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ಸಂಶೋಧಕರು ಮತ್ತು ಮಾರ್ಗದರ್ಶಕರು ಎದುರಿಸುತ್ತಿರುವ ಓದಿನ ಕೊರತೆ, ಸೈದ್ಧಾಂತಿಕ ತಿಳುವಳಿಕೆಯ ಅಭಾವ ಹಾಗೂ ಕೃತಿಚೌರ್ಯದಂತಹ ನೈತಿಕ ಸಮಸ್ಯೆಗಳನ್ನು ವಿಶ್ಲೇಷಿಸಲಾಗಿದೆ. ಅಧ್ಯಯನವು ಜ್ಞಾನದ ಬಹುಮುಖಿ ವಿಸ್ತರಣೆಯಾಗಬೇಕು ಮತ್ತು ಭಿನ್ನ ಮೂಲದ ಆಕರಗಳ ಸಂಗ್ರಹದೊಂದಿಗೆ ಸೃಜನಶೀಲತೆಯನ್ನು ಹೊಂದಿರಬೇಕು ಎಂದು ಪ್ರತಿಪಾದಿಸಲಾಗಿದೆ. ಕೇವಲ ಇತಿಹಾಸವನ್ನು ಕಟ್ಟುವುದರ ಬದಲು ಸಮಾಜದ ವಾಸ್ತವ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ಮತ್ತು ಮಾನವ ಕುಲದ ಒಳಿತಿಗಾಗಿ ಶ್ರಮಿಸುವ ಸಂಶೋಧನೆಗಳ ಅಗತ್ಯವನ್ನು ಈ ಪ್ರಬಂಧವು ಒತ್ತಿಹೇಳುತ್ತದೆ.

Article Details

Section

Research Articles

Author Biography

ಸವಿತಾ ರವಿಶಂಕರ್

ಸಹಾಯಕ ಪ್ರಾಧ್ಯಪಕರು, ಕನ್ನಡ ವಿಭಾಗ, ಕ್ರೈಸ್ಟ್ ಅಕಾಡೆಮಿ, ಹುಲ್ಲಹಳ್ಳಿ, ಬೆಂಗಳೂರು.

References

ಆಖ್ಯಾನ ವ್ಯಾಖ್ಯಾನ, ಡಾ. ಸಿ. ಎನ್. ರಾಮಚಂದ್ರನ್.

ಬಿಳಿಮಲೆ ಬ್ಲಾಗ್ಸ್ ಡಾಟ್ ಕಾಂ.