ವ್ಯಾಕರಣದ ಉಗಮ ಮತ್ತು ವಿಕಾಸ

Main Article Content

ರತ್ನಪ್ರಭಾ

Abstract

ಭಾಷೆಯನ್ನು ನಿಯಮಬದ್ಧವಾಗಿ ಕಲಿಯಲು ಮತ್ತು ಅದರ ರಚನೆಯನ್ನು ವಿಶ್ಲೇಷಿಸಲು ವ್ಯಾಕರಣ ಅತ್ಯಗತ್ಯ. ಪ್ರಾಚೀನ ಕಾಲದಲ್ಲಿ ಸಂಸ್ಕೃತದ ಪಾಣಿನಿಯ 'ಅಷ್ಟಾಧ್ಯಾಯಿ'ಯಿಂದ ಪ್ರೇರಣೆ ಪಡೆದು, ದಕ್ಷಿಣ ಭಾರತದ ದ್ರಾವಿಡ ಭಾಷೆಗಳಿಗೂ ವ್ಯಾಕರಣ ಗ್ರಂಥಗಳು ಒದಗಿಬಂದವು. ಕನ್ನಡ ಸಾಹಿತ್ಯದಲ್ಲಿ ಕ್ರಿ.ಶ. ೮ನೇ ಶತಮಾನದ 'ಕವಿರಾಜಮಾರ್ಗ'ದಲ್ಲಿಯೇ ವ್ಯಾಕರಣದ ಪ್ರಾಥಮಿಕ ವಿಚಾರಗಳು ಪ್ರಸ್ತಾಪವಾಗಿವೆ. ತದನಂತರ ಎರಡನೆಯ ನಾಗವರ್ಮನ 'ಶಬ್ದಸ್ಮೃತಿ' ಮತ್ತು 'ಕರ್ನಾಟಕ ಭಾಷಾಭೂಷಣ', ಹಾಗೂ ಕೇಶಿರಾಜನ ಸುಪ್ರಸಿದ್ಧ 'ಶಬ್ದಮಣಿದರ್ಪಣ' ಕೃತಿಗಳು ಕನ್ನಡ ವ್ಯಾಕರಣ ಪರಂಪರೆಯನ್ನು ಅತ್ಯಂತ ಶ್ರೀಮಂತಗೊಳಿಸಿದವು. ೧೭ನೇ ಶತಮಾನದ ಭಟ್ಟಾಕಳಂಕನ 'ಶಬ್ದಾನುಶಾಸನ'ವೂ ಮಹತ್ವದ ಮೈಲಿಗಲ್ಲಾಗಿದೆ. ಆಧುನಿಕ ಕಾಲಘಟ್ಟದಲ್ಲಿ ರೆವರೆಂಡ್ ಕಿಟೆಲ್, ವಿಲಿಯಂ ಕೇರಿ, ಮತ್ತು ಜಾನ್ ಮೆಕೆರೆಲ್ ಮುಂತಾದ ಪಾಶ್ಚಾತ್ಯ ವಿದ್ವಾಂಸರು ಇಂಗ್ಲಿಷ್ ಮಾದರಿಯಲ್ಲಿ ಕನ್ನಡಕ್ಕೆ ವ್ಯಾಕರಣಗಳನ್ನು ರಚಿಸಿ, ಹೊಸಗನ್ನಡ ವ್ಯಾಕರಣದ ಬೆಳವಣಿಗೆಗೆ ಭದ್ರ ಬುನಾದಿ ಹಾಕಿಕೊಟ್ಟ ಐತಿಹಾಸಿಕ ವಿಕಾಸವನ್ನು ವಿವರಿಸಲಾಗಿದೆ.

Article Details

Section

Research Articles

Author Biography

ರತ್ನಪ್ರಭಾ

ಕನ್ನಡ ಸಹಪ್ರಾಧ್ಯಾಪಕರು, ಸರ್ಕಾರಿ ಪ್ರಥಮದರ್ಜೆ ಕಾಲೇಜು, ಆನೇಕಲ್, ಬೆಂಗಳೂರು ನಗರಜಿಲ್ಲೆ.

References

ಪ್ರಾಚೀನ ಕನ್ನಡ ವ್ಯಾಕರಣಗಳು, ಎಂ. ವಿ. ಸೀತಾರಾಮಯ್ಯ, ಕನ್ನಡ ಅಧ್ಯಯನ ಸಂಸ್ಥೆ, 1979, ಮೈಸೂರು ವಿಶ್ವವಿದ್ಯಾಲಯ, ಮೈಸೂರು.

ಕಾವ್ಯಾವಲೋಕನ, ಆರ್. ನರಸಿಂಹಾಚಾರ್, ಮೈಸೂರು ವಿಶ್ವವಿದ್ಯಾಲಯ, 1903.

ಶಬ್ದಮಣಿದರ್ಪಣ, ತ.ಸು. ಶಾಮರಾಯ, ಶಕ್ತಿ ಮುದ್ರಣಾಲಯ, 1935.

ಕನ್ನಡ ಭಾಷಾ ವಿವೇಚನೆ, ಡಾ. ವಿ. ಜಿ. ಪೂಜಾರ, ಚೇತನ ಪ್ರಕಾಶನ, ಗುಲ್ಬರ್ಗಾ, 2012.

ಕನ್ನಡ ಸೊಲ್ಲರಿಮೆ ಮತ್ತು ನುಡಿಯರಿಮೆ, ಡಾ. ಕೃಷ್ಣಾನಂದ ಪಿ. ಎಂ., ಚಿಂತನ ಬಯಲು, ಮೊಡಂಕಾಪು ಅಂಚೆ, ಬಂಟ್ವಾಳ ತಾಲ್ಲೂಕು, ದಕ್ಷಿಣ ಕನ್ನಡ-574 219, 2013.