ರಾಯಚೂರು ಜಿಲ್ಲೆಯ ದಲಿತ ಕಾವ್ಯ: ಒಂದು ಅವಲೋಕನ
Main Article Content
Abstract
ದಲಿತ ಸಾಹಿತ್ಯವು ಶತಶತಮಾನಗಳಿಂದ ಶೋಷಣೆಗೆ ಒಳಗಾದ ಸಮುದಾಯಗಳ ನೋವು, ಸಿಟ್ಟು ಮತ್ತು ಪ್ರತಿಭಟನೆಯ ರಚನಾತ್ಮಕ ಅಭಿವ್ಯಕ್ತಿಯಾಗಿದೆ. ಕಲ್ಯಾಣ ಕರ್ನಾಟಕ ಭಾಗದ ರಾಯಚೂರು ಜಿಲ್ಲೆಯು ದಲಿತ ಕಾವ್ಯಕ್ಕೆ ಅತ್ಯಂತ ಶ್ರೀಮಂತ ಕೊಡುಗೆಯನ್ನು ನೀಡಿದೆ. ಅಂಬೇಡ್ಕರ್, ಜ್ಯೋತಿಬಾ ಫುಲೆ ಮೊದಲಾದ ದಾರ್ಶನಿಕರ ಚಿಂತನೆಗಳು ಹಾಗೂ ದಲಿತ ಸಂಘರ್ಷ ಸಮಿತಿಯ ಹೋರಾಟಗಳ ಪ್ರೇರಣೆಯಿಂದ ಈ ಭಾಗದ ಕವಿಗಳು ಗಟ್ಟಿಯಾದ ಕಾವ್ಯವನ್ನು ಸೃಷ್ಟಿಸಿದ್ದಾರೆ. ಬೋಳಬಂಡೆಪ್ಪ, ಸೋಮಯ್ಯ ವಲ್ಲಭ, ಆಂಜನೇಯ ಜಾಲಿಬೆಂಚಿ, ವೀರ ಹನುಮಾನ್, ಬಾಬು ಭಂಡಾರಿಗಲ್ ಮುಂತಾದ ಕವಿಗಳ ಕವಿತೆಗಳು ಸಮಾಜದಲ್ಲಿನ ಅಸಮಾನತೆ, ಜಾತಿಭೇದ, ದಬ್ಬಾಳಿಕೆ ಮತ್ತು ಬೂಟಾಟಿಕೆಯ ವ್ಯವಸ್ಥೆಯನ್ನು ತೀಕ್ಷ್ಣವಾಗಿ ಪ್ರಶ್ನಿಸುತ್ತವೆ. ಶೋಷಿತರ ಬದುಕಿನ ವಾಸ್ತವಿಕ ಚಿತ್ರಣಗಳೊಂದಿಗೆ ಸಮಾನತೆಯ ಆಶಯವನ್ನು ಬಿತ್ತುವಲ್ಲಿ ರಾಯಚೂರು ಜಿಲ್ಲೆಯ ದಲಿತ ಕಾವ್ಯವು ಪ್ರಬಲವಾಗಿ ರೂಪುಗೊಂಡಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಹೈದ್ರಾಬಾದ ಕರ್ನಾಟಕ ದಲಿತ ಸಾಹಿತ್ಯ, ಡಾ. ಎಂ. ಆರ್. ಚಲವಾದಿ, ಸಾಕ್ಷಿ ಪ್ರತಿಷ್ಠಾನ, ಹುಮನಾಬಾದ್, ಬೀದರ್, 2010.
ಬಂಡಾಯ-ದಲಿತ ಸಾಹಿತ್ಯ, ಡಾ. ಪುರುಷೋತ್ತಮ ಬಿಳಿಮಲೆ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, 2005.
ಹೈದ್ರಾಬಾದ ಕರ್ನಾಟಕ ದಲಿತ ಕಾವ್ಯ, ಡಾ. ಸೂರ್ಯಕಾಂತ, ಎಸ್. ಸುಜ್ಯಾತ್, ಪ್ರಸಾರಾಂಗ, ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ, 2014.
ಕತ್ತಲ ಲೋಕದ ಕಾವ್ಯ, ಈರಣ್ಣ ಕರುನಾಡಕರ್, ಪತಿಭಾ ಪ್ರಕಾಶನ, ರಾಯಚೂರು, 1988.