ಶ್ರೀ ಎಸ್. ಡಿ. ಇಂಚಲರ 'ಕಾವ್ಯಪ್ರೇಮ'
Main Article Content
Abstract
'ಬಸವತನಯ' ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ನವೋದಯ ಕವಿ ಶ್ರೀ ಎಸ್. ಡಿ. ಇಂಚಲರು ಕನ್ನಡ ತಾಯಿ ಭುವನೇಶ್ವರಿಗೆ ತಮ್ಮ ಸಾಹಿತ್ಯವನ್ನು ಅರ್ಪಿಸಿದ ಮಹನೀಯರು. ಬೆಳಗಾವಿ ಮತ್ತು ಅದರ ಸುತ್ತಲಿನ ಗಡಿನಾಡು ಪರಿಸರದಲ್ಲಿ ಕನ್ನಡದ ವಾತಾವರಣವನ್ನು ನಿರ್ಮಿಸುವಲ್ಲಿ ಅವರು ಮಹತ್ತರ ಸೇವೆ ಸಲ್ಲಿಸಿದರು. ಅವರ ಕಾವ್ಯಗಳಲ್ಲಿ ಪ್ರಕೃತಿ ಆರಾಧನೆ, ನಿಸರ್ಗ ಸೌಂದರ್ಯ, ರಸಪೂರ್ಣತೆ ಹಾಗೂ ಸಾಮಾಜಿಕ ಚಿಂತನೆಗಳು ಎದ್ದು ಕಾಣುತ್ತವೆ. ಕುವೆಂಪು, ಬೇಂದ್ರೆಯವರಿಂದ ಪ್ರೇರಿತರಾದ ಇಂಚಲರು ಕೇವಲ ತಾವು ಬೆಳೆಯುವುದಲ್ಲದೆ ಯುವ ಬಳಗವನ್ನು ಕಟ್ಟಿ ಬೆಳೆಸಿದರು. ತಾಯಿ ಮಗುವಿನ ಮಮತೆ, ರಾಷ್ಟ್ರೀಯ ಭಾವೈಕ್ಯತೆ, ನಾಡು-ನುಡಿಯ ಬಗೆಗಿನ ಅಭಿಮಾನ, ಮತ್ತು ಸ್ನೇಹಿತರ ಮೇಲಿನ ಪ್ರೀತಿಯನ್ನು ಅವರ ಕವಿತೆಗಳು ಓದುಗರಿಗೆ ರಸದೌತಣವಾಗಿ ಉಣಬಡಿಸುತ್ತವೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಕನ್ನಡದ ಪೋಷಕರು ಡಾ ಜಿ.ಡಿ.ಜೋಶಿ, ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ.
ಕವಿ ಎಸ್. ಡಿ. ಇಂಚಲರ ಕನ್ನಡ ಸೇವೆ ಒಂದು ಅಧ್ಯಯನ ಆನಂದಕುಮಾರ ಬ ಪಾಟೀಲ, ಕನ್ನಡ ವಿಶ್ವವಿದ್ಯಾಲಯ ಹಂಪಿ-2013
'ಇಂಚರ' ಎಸ್. ಡಿ. ಇಂಚಲರ ಸಮಗ್ರ ಕಾವ್ಯ- ಪ್ರೊ.ಬಿ.ಎಸ್. ಗವಿಮಠರು, ಸಂಪಾದನೆ ಕನ್ನಡ ಜಾಗೃತಿ ಪುಸ್ತಕ ಮಾಲೆ
ಬೆಳಗಾವಿ ಬೆಳಕು ಸಂಸ್ಮರಣ ಸಂಪುಟ-ಅಖಿಲ ಭಾರತ 70ನೇ ಕನ್ನಡ ಸಾಹಿತ್ಯ ಸಮ್ಮೇಳನ, ಬೆಳಗಾವಿ 2003 ಸಂಪಾದಕರು- ಡಾ ಎಸ್.ಆರ್ ಗುಂಜಾಳ