ಬೆಟ್ಟದ ಜೀವ ಕಾದಂಬರಿಯಲ್ಲಿ ಭೂಮಿ ಮತ್ತು ಮನುಷ್ಯ ಸಂಬಂಧ

Main Article Content

ಮಣೆಗಾರ ಲಕ್ಷ್ಮಣ

Abstract

ಶಿವರಾಮ ಕಾರಂತರ ‘ಬೆಟ್ಟದ ಜೀವ’ ಕಾದಂಬರಿಯನ್ನಾಧರಿಸಿ ಮನುಷ್ಯ ಮತ್ತು ನಿಸರ್ಗದ ನಡುವಿನ ಜೈವಿಕ ಹಾಗೂ ಅವಿನಾಭಾವ ಸಂಬಂಧವನ್ನು ಇಲ್ಲಿ ವಿವರಿಸಲಾಗಿದೆ. ಕಾಡನ್ನೇ ನಾಡಾಗಿಸಿಕೊಂಡು, ಪ್ರಕೃತಿಯ ವಿಕೋಪಗಳು ಮತ್ತು ವನ್ಯಜೀವಿಗಳ ದಾಳಿಯ ನಡುವೆಯೂ ಬೆಟ್ಟದ ತುದಿಯಲ್ಲಿ ಬದುಕನ್ನು ಕಟ್ಟಿಕೊಳ್ಳುವ ಗೋಪಾಲಯ್ಯ ಮತ್ತು ಶಂಕರಿ ದಂಪತಿಗಳ ಸಾಹಸವನ್ನು ಚಿತ್ರಿಸಲಾಗಿದೆ. ಭೂಮಿಯನ್ನು ನಂಬಿ ಬದುಕುವ ಒಕ್ಕಲುಮಕ್ಕಳ ಶ್ರಮ, ಕೃಷಿ ಸಂಸ್ಕೃತಿ ಹಾಗೂ ಮಾನವೀಯ ಮೌಲ್ಯಗಳನ್ನು ನಿರೂಪಕನ ದೃಷ್ಟಿಕೋನದಿಂದ ಕಟ್ಟಿಕೊಡಲಾಗಿದೆ. ಕೇವಲ ಭೌತಿಕ ಲಾಭಕ್ಕಿಂತಲೂ ಪ್ರಕೃತಿಯ ಮಡಿಲಲ್ಲಿ ಮನುಷ್ಯ ಕಂಡುಕೊಳ್ಳುವ ನೆಮ್ಮದಿ ಮತ್ತು ಸಾಂಸ್ಕೃತಿಕ ಹೋರಾಟದ ಮಹತ್ವವನ್ನು ಇಲ್ಲಿ ಎತ್ತಿತೋರಿಸಲಾಗಿದೆ.

Article Details

Section

Research Articles

Author Biography

ಮಣೆಗಾರ ಲಕ್ಷ್ಮಣ

ಸಂಶೋಧನಾರ್ಥಿ, ಕನ್ನಡ ಸಾಹಿತ್ಯ ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ.

References

ಅನಂತಮೂರ್ತಿ ಯು. ಆರ್., 1992, ಪ್ರಜ್ಞೆ ಮತ್ತು ಪರಿಸರ, 2 ಭಾರತೀಯ ಸಂಸ್ಕೃತಿ ಮತ್ತು ಲೇಖನ, ಅಕ್ಷರ ಪ್ರಕಾಶನ. ಸಾಗರ.

ಅಶೋಕ ಟಿ. ಪಿ. (ಸಂ), 1993, ಈ ಶತಮಾನದ ನೋಟ ಶಿವರಾಮ ಕಾರಂತ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಕೃಷ್ಣಾನಂದ ಕಾಮತ್, 1992, ಸಸ್ಯ ಪ್ರಪಂಚ, ಬೆಂಗಳೂರು-41.

ನಾಗ ಐತಾಳ (ಸಂ), ಕಾರಂತ ಚಿಂತನ ಕಡಲಾಚೆಯ ಕನ್ನಡಿಗರಿಂದ, ಅಕ್ಷರ ಪ್ರಕಾಶನ, ಸಾಗರ.

ಶಿವರಾಮ ಕಾರಂತ, 2019, ಬೆಟ್ಟದ ಜೀವ, ಸಪ್ನ ಬುಕ್ ಹೌಸ್, ಬೆಂಗಳೂರು.

ಶಿವರುದ್ರಪ್ಪ ಜಿ. ಎಸ್., 1981, ಹೊಸಗನ್ನಡ ಸಾಹಿತ್ಯ ಎರಡು ಮಾರ್ಗಗಳು, ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.