ಕುಂ. ವೀರಭದ್ರಪ್ಪ ಅವರ ಕಾದಂಬರಿಗಳು: ಪ್ರತಿಭಟನೆಯ ಹೊಸ ಸಾಧ್ಯತೆಯ ಶೋಧ

Main Article Content

ಮಲ್ಲಯ್ಯ ಸಂಡೂರು

Abstract

ಕುಂ. ವೀರಭದ್ರಪ್ಪನವರ 'ಬೇಲಿಯ ಹೂಗಳು' ಮತ್ತು 'ಕೊಟ್ರೇಶಿ ಕನಸು' ಕಾದಂಬರಿಗಳಲ್ಲಿ ಕಂಡುಬರುವ ದಲಿತ ಮತ್ತು ಬಂಡಾಯ ಸಂವೇದನೆಗಳನ್ನು ಇಲ್ಲಿ ಶೋಧಿಸಲಾಗಿದೆ. ಶೋಷಿತ ಸಮುದಾಯಗಳು ಪ್ರಭುತ್ವ ಮತ್ತು ಮೇಲ್ವರ್ಗದ ದಬ್ಬಾಳಿಕೆಯ ವಿರುದ್ಧ ನಡೆಸುವ ಪ್ರತಿರೋಧವನ್ನು ವಿಶ್ಲೇಷಿಸಲಾಗಿದೆ. 'ಬೇಲಿಯ ಹೂಗಳು' ಕಾದಂಬರಿಯಲ್ಲಿ ಜೀತಪದ್ಧತಿಯ ಕ್ರೌರ್ಯ ಮತ್ತು ಅದರಿಂದ ಬಿಡುಗಡೆ ಪಡೆಯಲು ನಡೆಸುವ ಹೋರಾಟವಿದ್ದರೆ, 'ಕೊಟ್ರೇಶಿ ಕನಸು' ಕಾದಂಬರಿಯಲ್ಲಿ ಶಿಕ್ಷಣದ ಮೂಲಕ ಆತ್ಮಗೌರವವನ್ನು ಪಡೆದುಕೊಳ್ಳುವ ತವಕವಿದೆ. ಲೇಖಕರು ಈ ಕಾದಂಬರಿಗಳಲ್ಲಿ ಪ್ರತಿಭಟನೆಯನ್ನು ಕೇವಲ ಆಕ್ರೋಶವನ್ನಾಗಿ ಅಲ್ಲದೆ, ಬದುಕಿನ ಅನಿವಾರ್ಯತೆಯನ್ನಾಗಿ ಚಿತ್ರಿಸಿದ್ದಾರೆ.

Article Details

Section

Research Articles

Author Biography

ಮಲ್ಲಯ್ಯ ಸಂಡೂರು

ಅಧ್ಯಾಪಕರು, ಕನ್ನಡ ಅಧ್ಯಯನ ವಿಭಾಗ, ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರ, ಜ್ಞಾನ ಸರೋವರ, ನಂದಿಹಳ್ಳಿ, ಸಂಡೂರು.

References

ಕುಂ.ವೀರಭದ್ರಪ್ಪ, ಬೇಲಿಯ ಹೂಗಳು, ಹೇಮಂತ ಸಾಹಿತ್ಯ, ಬೆಂಗಳೂರು.

ಕುಂ. ವೀರಭದ್ರಪ್ಪ, ಕೋಟ್ರೇಶಿ ಕನಸು, ಸಪ್ನ ಬುಕ್ ಹೌಸ್, ಬೆಂಗಳೂರು.

ವೆಂಕಟಾಚಲಶಾಸ್ತ್ರೀ ಟಿ.ವಿ., ಪಂಪ ಸಂಪುಟ, ವಿಕ್ರಮಾರ್ಜುನವಿಜಯಂ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಮನುಜ, ಪರಂಪರೆ ಹಾಗೂ ದಲಿತ ಬಂಡಾಯ ಸಾಹಿತ್ಯ, ಸಿದ್ದಾರ್ಥ ಗ್ರಂಥಮಾಲೆ ಮೈಸೂರು.