ನವೋದಯ ಸಂದರ್ಭದಲ್ಲಿ ಮಹಿಳಾ ಸಾಹಿತ್ಯ ಬೆಳೆದು ಬಂದ ಬಗೆ
Main Article Content
Abstract
ಕನ್ನಡ ಸಾಹಿತ್ಯ ಚರಿತ್ರೆಯ ನವೋದಯ ಕಾಲಘಟ್ಟದಲ್ಲಿ ಮಹಿಳಾ ಸಾಹಿತ್ಯದ ಕೊಡುಗೆ ಅಪಾರವಾಗಿದೆ. ನವೋದಯ ಸಂದರ್ಭದಲ್ಲಿ ಮಹಿಳಾ ಸಾಹಿತ್ಯ ಬೆಳೆದು ಬಂದ ಬಗೆಯನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಅಂದಿನ ಸಾಮಾಜಿಕ ಅನಿಷ್ಟಗಳಾದ ಬಾಲ್ಯವಿವಾಹ, ವರದಕ್ಷಿಣೆ ಮತ್ತು ಅಸ್ಪೃಶ್ಯತೆಯಂತಹ ಸಮಸ್ಯೆಗಳ ವಿರುದ್ಧ ಮಹಿಳಾ ಲೇಖಕಿಯರು ತಮ್ಮ ಸಾಹಿತ್ಯದ ಮೂಲಕ ಧ್ವನಿ ಎತ್ತಿದರು. ನಂಜನಗೂಡು ತಿರುಮಲಾಂಬ, ಆರ್. ಕಲ್ಯಾಣಮ್ಮ, ಭಾರತಿ (ತಿರುಮಲೆ ರಾಜಮ್ಮ), ಶ್ಯಾಮಲಾ ದೇವಿ ಬೆಳವೊಂಗಕರ ಮುಂತಾದ ಪ್ರಮುಖ ಲೇಖಕಿಯರ ಕೃತಿಗಳು ಮತ್ತು ಅವರ ಸಾಹಿತ್ಯ ಸೇವೆಯನ್ನು ಗುರುತಿಸಲಾಗಿದೆ. ಮಹಿಳಾ ಸಂವೇದನೆ ಮತ್ತು ಸ್ತ್ರೀ ಜಾಗೃತಿಯ ನೆಲೆಗಟ್ಟಿನಲ್ಲಿ ಈ ಸಾಹಿತ್ಯವನ್ನು ಅಧ್ಯಯನ ಮಾಡಲಾಗಿದೆ.
Article Details
Issue
Section
Research Articles

This work is licensed under a Creative Commons Attribution-NonCommercial-ShareAlike 4.0 International License.
References
ಮಹಿಳಾ ಸಾಹಿತ್ಯ ಚರಿತ್ರೆ : ಸಂ. ಎಚ್.ಎಸ್.ಶ್ರೀಮತಿ : ಪ್ರಸಾರಾಂಗ ಹಂಪಿ ವಿವಿ : 2006